ಪದವಿ ಪೂರ್ವ ಶಿಕ್ಷಣ ಇಲಾಖೆ ದ. ಕ ಜಿಲ್ಲೆ, ಮಂಗಳೂರು ಹಾಗೂ ವಿಠಲ ಪದವಿಪೂರ್ವ ಕಾಲೇಜು ಇದರ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಆದರ್ಶ ಚೊಕ್ಕಡಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಯುವ ಉದ್ಯಮಿಗಳಾದ ಭಾಸ್ಕರ್ ಶೆಟ್ಟಿ ಹಾಗೂ ಇರ್ಷಾದ್ ಭಾಗವಹಿಸಿ ಇಂದಿನ ಪಂದ್ಯಾವಳಿಗೆ ಬೇಕಾದ ಬಹುಮಾನಗಳನ್ನು ನೀಡಿ ಸಹಕರಿಸಿದರು.
ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಡಿ ಉಪನ್ಯಾಸಕಿ ಹಾಗೂ ಲಯನ್ಸ್ ಅಧ್ಯಕ್ಷೆ ಜಲಜಾಕ್ಷಿ, ತೀರ್ಪುಗಾರರಾದ ಶಿಶಿರ್. ಗೋಪಾಲ್ ಹಾಗೂ ಗೌತಮ್ ಶೆಣೈ ಉಪಸ್ಥಿತರಿದ್ದರು.
ದೈಹಿಕ ನಿರ್ದೇಶಕ ಶ್ರೀನಿವಾಸ್ ಗೌಡ ಸ್ವಾಗತಿಸಿ ನಿರೂಪಿಸಿ, ಉಪನ್ಯಾಸಕಿ ಮುಕ್ತಶ್ರೀ ವಂದಿಸಿದರು.
ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ
ಪ್ರಥಮ :ಸತ್ಯ ಸಾಯಿ ಲೋಕ ಸೇವಾ ಕಾಲೇಜು ಅಳಿಕೆ
ದ್ವಿತೀಯ : ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ
ಬಾಲಕಿಯರ ವಿಭಾಗದಲ್ಲಿ
ಪ್ರಥಮ :ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ
ದ್ವಿತೀಯ : ಮೆಲ್ಕಾರ್ ವುಮೆನ್ಸ್ ಕಾಲೇಜು ಮಾರ್ನಾಬೈಲ್ ಬಹುಮಾನಗಳನ್ನು ಪಡೆದುಕೊಂಡಿತು.