


ಅಧ್ಯಕ್ಷರಾಗಿ ದೇವಿಪ್ರಸಾದ್ ಶೆಟ್ಟಿ ಬೆಂಞಂಣ್ತಿಮಾರ್ ಗುತ್ತು
ವಿಟ್ಲ: ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ವತಿಯಿಂದ ಜರುಗುವ ಬಾಲಗೋಕುಲಗಳ ಹಾಗೂ ಕ್ಷೇತ್ರ ಸಮಿತಿಯ ಸಭೆ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯೊಂದಿಗೆ ಮಕ್ಕಳಿಗೆ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಆರಂಭವಾದ ಬಾಲಗೋಕುಲ ಸಮಿತಿಯು ಕಳೆದ ಹಲವಾರು ವರ್ಷಗಳಿಂದ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿದೆ.
ಮುಂದಿನ ಎರಡು ವರ್ಷಗಳ ಅವಧಿಗೆ ರಚಿಸಲಾದ ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ನೂತನ ಅಧ್ಯಕ್ಷರಾಗಿ ದೇವಿಪ್ರಸಾದ್ ಶೆಟ್ಟಿ ಬೆಂಞತ್ತಿಮಾರ್ ಗುತ್ತು ಹಾಗೂ ಗೌರವಾಧ್ಯಕ್ಷರಾಗಿ ಶ್ರೀ ಕಂಠ ವರ್ಮ ಅರಮನೆ ವಿಟ್ಲ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ದಿನೇಶ್ ಮಾಡೋಲು, ರಮೇಶ್ ಕಡಂಬು, ಮುರಳಿಧರ ಕೇಪು, ಈಶ್ವರ ಕೂಜಪ್ಪಾಡಿ, ಸುಂದರ ಧರ್ಮನಗರ, ಅಭಿಷೇಕ್ ಬಳ್ಳಾಲ್, ರವಿ ವರ್ಮ ವಿಟ್ಲ ಇವರನ್ನು ಆಯ್ಕೆಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ನಟೇಶ್ ಮಂಕುಡೆ ಕಾರ್ಯದರ್ಶಿಗಳಾಗಿ ಸುರೇಶ್ ಕಡಂಬು, ರೊಹಿನಾಥ ಮಂಕುಡೆ, ರಾಜೇಶ್ ಬೊಬೈಕೇರಿ, ಜಗದೀಶ ಧರ್ಮನಗರ ಹಾಗೂ ಕೋಶಾಧಿಕಾರಿಯಾಗಿ ನಾಗರಾಜ್.ಎನ್. ವಿಟ್ಲ ಮೆಸ್ಕಾಂ ಮತ್ತು ಸಹ ಕೋಶಾಧಿಕಾರಿಯಾಗಿ ಜಗದೀಶ್ ಪಾಣೆಮಜಲು ಇವರನ್ನು ಆಯ್ಕೆಮಾಡಲಾಯಿತು.