ವಿಟ್ಲ: ವಿಶ್ವಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ವತಿಯಿಂದ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಎದುರು ಪಂಜಿನ ಮೆರವಣಿಗೆ ನಡೆಯಿತು. ಕೃಷ್ಣಯ್ಯ ಅರಮನೆ ದೊಂದಿ ಉರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ವಿಟ್ಲ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ಸಭಾಕಾರ್ಯಕ್ರಮವು ವಿಟ್ಲ ಖಾಸಗಿ ನಿಲ್ದಾಣದಲ್ಲಿ ನೆರವೇರಿತು. ಅಖಂಡ ಭಾರತದ ಸಂಕಲ್ಪದ ಕಲ್ಪನೆಯನ್ನು ದಿಕ್ಸೂಚಿ ಭಾಷಣಕಾರರದ ಲತೇಶ್ ಕುಮಾರ್ ಬಾಕ್ರಬೈಲ್ ನೆರವೇರಿಸಿದರು. ಸಭಾಧ್ಯಕ್ಷರಾಗಿ ಕ್ಯಾಪ್ಟನ್ ಧನಂಜಯ್ ನಾಯಿತೊಟ್ಟು ರಾಷ್ಟ್ರ ಕಲ್ಪನೆಯ ಬಗ್ಗೆ ಮಾತಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಮುಖರಾದ ಪದ್ಮನಾಭ್ ಕಟ್ಟೆ ವಿಟ್ಲ, ಗೋವರ್ಧನ್ ವಿಟ್ಲ, ಪ್ರಖಂಡ ಕಾರ್ಯದರ್ಶಿ ನಾಗೇಶ್ ಉಪಸ್ಥಿತರಿದ್ದರು. ವಿಟ್ಲ ಪ್ರಖಂಡದ ಎಲ್ಲಾ ಘಟಕಗಳ ಪ್ರಮುಖರಾದ ಜಯಂತ ವಿಟ್ಲ , ಅಶೋಕ್ ಮಾಣಿಲ, ಯತೀಶ್ ಪೆರುವಾಯಿ, ದಿನೇಶ್ ಕನ್ಯಾನ, ಉದಯ ಮಾಣಿಲ, ಸಂದೀಪ್ ವಿಟ್ಲ, ಅನಿಲ್, ಮೋಕ್ಷಿತ್ ಪೆರುವಾಯಿ, ಮೋಹನ್ ಮಿತ್ತೂರು, ಪ್ರದೀಪ್ ಸಾಲೆತ್ತೂರು, ಹಾಗೂ ಪರಿವಾರದ ಕಾರ್ಯಕರ್ತರು ದೊಂದಿ ಮೆರವಣಿಗೆಯೊಂದಿಗೆ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ವಿ.ಎಚ್.ಪಿ ಅಧ್ಯಕ್ಷ ನಾಯಿತೊಟ್ಟು ವಿಶ್ವನಾಥ್ ಸ್ವಾಗತಿಸಿ, ಪ್ರಖಂಡ ಸಂಚಾಲಕ ಚೇತನ್ ಕಡಂಬು ವಂದಿಸಿದರು. ಹರೀಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.