ವಿಟ್ಲ : ಲಯನ್ಸ್ ಕ್ಲಬ್ ವಿಟ್ಲ ಸಿಟಿ ಮತ್ತು ಕಂಪಾನಿಯೋ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ಸಹಕಾರದೊಂದಿಗೆ ಉಚಿತ ಪೂಟ್ ಫಲ್ಸ್ ಥೆರಪಿ ಶಿಬಿರವು ಮೇ 18ರಿಂದ 31ರ ವರೆಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಬಂಗಾರು ಅರಸರು ಅರಮನೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಲಯನ್| ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ಲಯನ್| ಸಂದೇಶ್ ಶೆಟ್ಟಿ ಬಿ. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯನ್|ಜಿಲ್ಲಾ 317(D) ಪ್ರಾಂತೀಯ ಅಧ್ಯಕ್ಷ ಲಯನ್| ಸುದರ್ಶನ್ ಪಡಿಯಾರ್, ವಿಟ್ಲ ಪ.ಪಂ. ಕೌನ್ಸಿಲರ್ ಸಂಗೀತ ಜಗದೀಶ್ ಪಾಣೆಮಜಲು, ಲಯನ್|ಸುರೇಶ್ ಬನಾರಿ, ಇಂಜಿನಿಯರ್ ವಿಟ್ಲ, ಶ್ರೀ ಸಾಯಿ ಇಂಡಿಯಾನ್ ಗ್ಯಾಸ್ ಏಜೆನ್ಸಿಯ ಮಾಲಕ ಲಯನ್| ಸತೀಶ್ ಕುಮಾರ್ ಆಳ್ವ ಭಾಗವಹಿಸಲಿದ್ದಾರೆ.
ಥೆರಪಿ ಸಮಯವು ಪ್ರತೀ ದಿನ ಬೆಳಿಗ್ಗೆ 9.30ರಿಂದ ಸಂಜೆ 4.30ರ ವರೆಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.