Monday, May 6, 2024
spot_imgspot_img
spot_imgspot_img

ವಿಟ್ಲ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ರಿ. ಚಂದಳಿಕೆ ವಿಟ್ಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಬೆಳ್ಳಿಹಬ್ಬ ಸಮಿತಿ ಇದರ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -G L Acharya panikkar
- Advertisement -

ವಿಟ್ಲ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ರಿ. ಚಂದಳಿಕೆ ವಿಟ್ಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಬೆಳ್ಳಿಹಬ್ಬ ಸಮಿತಿ ವತಿಯಿಂದ 19.09.2023 ರಿಂದ 22.09.2023 ರ ತನಕ ಮಂಗಳ ಮಂಟಪ ಚಂದಳಿಕೆಯಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಬೆಳ್ಳಿಹಬ್ಬ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತು.

ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಣೇಶೋತ್ಸವ ವಿಜೃಂಭಣೆಯೊಂದಿಗೆ ಜರಗಲಿದೆ. ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ಶಂಕರ ಭಟ್ ಬದನಾಜೆ ಅವರ ಮಾರ್ಗದರ್ಶನ, ಕೃಷ್ಣಯ್ಯ ಕೆ ಅರಮನೆ, ಗಣೇಶ ಚಂದಳಿಕೆ ಮತ್ತು ಅರ್ಚಕ ಉದಯೇಶ್ ಕೆದಿಲಾಯರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಜಯರಾಮ ಪರನೀರು ನಿಡ್ಯ. ಕ್ಲಬ್ ನ ಅಧ್ಯಕ್ಷ ಗಂಗಾಧರ ಸಿ, ಕೋಶಾಧಿಕಾರಿ ನರೇಂದ್ರ ಸಿ, ಕಾರ್ಯದರ್ಶಿ ವಿಶ್ವನಾಥ ಅಳಿಕೆ. ದೇವಸ್ಥಾನದ ಜಯರಾಮ ಬಲ್ಲಾಳ್ ಅರಮನೆ ಹಾಗೂ ಪದಾಧಿಕಾರಿಗಳಾದ ಬಿ. ಕೆ. ಬಾಬು. ಕೃಷ್ಣ ಮುದೂರು. ಜಗದೀಶ್ ಗೌಡ ಎಂ. ಲೋಹಿತ್ ಎಂ. ದೀಕ್ಷಿತ್ ಎಂ. ಚೇತನ್ ಕೆ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!