ವಿಟ್ಲ: ವಿಟ್ಲ-ಪಡ್ನೂರು ಗ್ರಾಮದ ಕಡಂಬು-ಸುರಂಗದಮೂಲೆ ನಿವಾಸಿ ಚಂದಪ್ಪ ಮೂಲ್ಯ ಇವರ ಮಗಳು ಪೂರ್ಣಿಮಾ ಅಂಗವೈಕಲ್ಯದಿಂದ ಬಳಲುತ್ತಿದ್ದು, ಮಾನಸಿಕವಾಗಿ ಅಸ್ವಸ್ಥತೆಗೊಂಡು ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಇವರ ಈ ಕಷ್ಟವನ್ನು ಕಂಡ ಅರವಿಂದ ರೈ ಮೂರ್ಜೆಬೆಟ್ಟು ಇವರ ಮನವಿ ಮೇರೆಗೆ, ಆಳ್ವಾಸ್ ವಿದ್ಯಾಸಂಸ್ಥೆಯ ಡಾ.ಮೋಹನ್ ಆಳ್ವ ಮತ್ತು ಚಂದ್ರಹಾಸ ಶೆಟ್ಟಿ ರಂಗೋಲಿ ಅವರ ಸಹಕಾರದಿಂದ MRG ಗ್ರೂಪ್ ಇದರ ಅಧ್ಯಕ್ಷರು, ಉದ್ಯಮಿ, ಕೊಡುಗೈ ದಾನಿಯಾಗಿರುವ, ಗೊಲ್ಡ್ ಪಿಂಚ್ ಶ್ರೀ ಕೆ. ಪ್ರಕಾಶ್ ಶೆಟ್ಟಿ ಅವರು ರೂ. 20,000/- ಮತ್ತು ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಆವರು ರೂ.10,000/- ಚೆಕ್ಕನ್ನು ಒದಗಿಸಿಕೊಟ್ಟಿದ್ದಾರೆ. ಅದನ್ನು ಫಲಾನುಭವಿ ಪೂರ್ಣಿಮಾ ಅವರಿಗೆ ಅವರ ಮನೆಯಲ್ಲಿ ಶ್ರೀ ಅರವಿಂದ ರೈ ಮೂರ್ಜೆಬೆಟ್ಟು ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಶ್ರೀ ರವೀಶ್ ಶೆಟ್ಟಿ ಕಾರ್ಕಳ, ವಿಟ್ಲ-ಪಡ್ನೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ರೀ ನಾಗೇಶ್ ಶೆಟ್ಟಿ ಕೊಡಂಗಾಯಿ, ಶ್ರೀ ಲೋಕಪ್ಪ ಗೌಡ ಬನ, ವಿಟ್ಲ-ಪಡ್ನೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯರುಗಳಾದ ಶ್ರೀ ನಾಗೇಶ್ ಗೌಡ ಬನ, ಉಮೇಶ್ ಶೆಟ್ಟಿ ತಾರಿಯಡ್ಕ ಹಾಗೂ ಮನೆಯವರು ಉಪಸ್ಥಿತರಿದ್ದರು.