Monday, June 30, 2025
spot_imgspot_img
spot_imgspot_img

ವಿಟ್ಲ: (ಜ.14) ದೇವಸ್ಯದಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀ ಅರಸು ಮುಂಡಾಲತ್ತಾಯರು ದೈವದ ಭಂಡಾರ ಆಗಮನ

- Advertisement -
- Advertisement -

(ಜ. 24) ಶ್ರೀ ಅರಸು ಮುಂಡಾಲತ್ತಾಯರು ದೈವದ ನೇಮೋತ್ಸವ

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಪ್ರಧಾನ ದೈವ ಶ್ರೀ ಅರಸು ಮುಂಡಾಲತ್ತಾಯರು ಸಪರಿವಾರ ದೈವಗಳ ಸನ್ನಿಧಿ, ವಿಟ್ಲ, ದೇವಸ್ಯದಲ್ಲಿ ಜನವರಿ 14 ಮಂಗಳವಾರದಂದು ಬೆಳಗ್ಗೆ 11 ಗಂಟೆಗೆ ಕೀರ್ತನ್ ಕೆದಿಲಾಯ (ಗುರುಂಪು) ಪೌರೋಹಿತ್ಯದಲ್ಲಿ ಗಣಹೋಮ ನಡೆಯಲಿದೆ.

ಸಂಜೆ 6 ಗಂಟೆಗೆ ದೇವಸ್ಯದಿಂದ ಶ್ರೀ ಪಂಚಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಶ್ರೀ ಅರಸು ಮುಂಡಾಲತ್ತಾಯರು ದೈವದ ಭಂಡಾರ ಆಗಮನವಾಗಲಿದೆ. ಶ್ರೀ ದೈವಕ್ಕೆ ಭಕ್ತರಿಂದ ಸಿಯಾಲ, ಪಿಂಗಾರ, ಪುಷ್ಪಾದಿಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು. ಸೀಯಾಳ ಒಪ್ಪಿಸುವ ಭಕ್ತರು ಸಂಜೆ 5 ಗಂಟೆಗೆ ಒಳಗೆ ಸಮರ್ಪಿಸಬೇಕು.

24-01-2025 ಶುಕ್ರವಾರದಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಅರಸು ಮುಂಡಾಲತ್ತಾಯರು ದೈವಕ್ಕೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರುಗಡೆ ನೇಮೋತ್ಸವ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಸ್ತ ಭಕ್ತಾದಿಗಳು ಪಾಲ್ಗೊಳ್ಳುವಂತೆ ಶ್ರೀ ಅರಸು ಮುಂಡಾಲತ್ತಾಯರು ಸಪರಿವಾರ ದೈವಗಳ ಸೇವಾ ಸಮಿತಿ ದೇವಸ್ಯ ವಿಟ್ಲ ಇದರ ಅಧ್ಯಕ್ಷರು/ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!