- Advertisement -
- Advertisement -
ವಿಟ್ಲ: ಕೆದಿಲ ಗ್ರಾಮದ ಗಾಂಧಿನಗರದಲ್ಲಿರುವ ಪಾಂಚಜನ್ಯ ಸಂಕೀರ್ಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಆ.15ರಂದು ಸ್ವಾತಂತ್ರ್ಯ ದಿನಾಚರಣೆಯು ಜರಗಿತು.
ಧ್ವಜಾರೋಹಣವನ್ನು ಕೆದಿಲ ಉಳ್ಳಾಕುಲು ಧೂಮಾವತಿ ಮಲರಾಯ ದೈವಸ್ಥಾನದ ಅಧ್ಯಕ್ಷರಾದ ಜೆ. ಕೃಷ್ಣ ಭಟ್ ಮಿರಾವನ ನೆರವೇರಿಸಿ, ಸೇರಿರುವ ಜನರನ್ನು ಉದ್ಧೇಶಿಸಿ ಸ್ವಾತಂತ್ರ್ಯದ ಬಗ್ಗೆ ಕೆಲವು ಮಾತುಗಳನ್ನಾಡಿದರು.
ಕೆನರಾ ಬ್ಯಾಂಕ್ ಮೆನೇಜರ್ ಸಾಂದರ್ಭಿಕ ಮಾತುಗಳನ್ನಾಡಿದರು ನಿವೃತ ಶಿಕ್ಷಕ, ಶ್ರೀ ದೇವಿ ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಪ್ರಗತಿ ವಳಂಗಜೆ ವಂದನಾರ್ಪಣೆಗೈದರು.
ಸಭೆಯಲ್ಲಿ ಪಂಚಾಯತ್ ಅಧ್ಯಕ್ಷೆ ಜಯಂತಿ ಡಿ ಶೆಟ್ಟಿ, ಉಪಾಧ್ಯಕ್ಷ ಉಮೇಶ್ ಮುರುವ ಉಪಸ್ಥಿತರಿದ್ದರು. ಪಾಂಚಜನ್ಯದ ಮಾಲಿಕ ಶ್ಯಾಮ್ ಪ್ರಸಾದ್ ಒ. ಪುಂಚತೋಡಿ . ನಿವೃತ ಬ್ಯಾಂಕ್ ಉದ್ಯೋಗಿ ಪರಮೇಶ್ವರ ನಾವುಡ ಹಾಗು ಬ್ಯಾಂಕ್ ಸಿಬ್ಬಂದ್ಧಿ, ಹಾಗು ಪಂಚಾಯತ್ ಸದಸ್ಯರು, ಊರ ಪ್ರಮುಖರು ಉಪಸ್ಥಿತಿಯಲ್ಲಿ ಇದ್ದರು. ಸ್ವಾತಂತ್ರೋತ್ಸವವನ್ನು ವಿಜೃಂಭಣೆಯಿಂದ ನೆರವೇರಿತು.
- Advertisement -