ಆರೋಪಿಯ ಅಂಗಡಿಯ ವ್ಯಾಪಾರ ಪರವಾನಿಗೆಯನ್ನು ರದ್ದುಗೊಳಿಸುವಂತೆ ಸಾರ್ವಜನಿಕರಿಂದ ಗ್ರಾ.ಪಂಗೆ ಮನವಿ



ವಿಟ್ಲ: ಕುದ್ದುಪದವು ಎಂಬಲ್ಲಿರುವ ಎ.ಎಮ್ ಸ್ಟೋರ್ ದಿನಸಿ ಅಂಗಡಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ದೌರ್ಜನ್ಯ ನಡೆದಿರುವುದರಿಂದ ಆ ಅಂಗಡಿಯ ವ್ಯಾಪಾರ ಪರವಾನಿಗೆಯನ್ನುರದ್ದುಗೊಳಿಸುವಂತೆ ಸಾರ್ವಜನಿಕರು ಗ್ರಾ. ಪಂಗೆ ಮನವಿ ನೀಡಿದ್ದಾರೆ.
ಕೇಪು ಗ್ರಾಮದ ಪಂಚಾಯತ್ ವ್ಯಾಪ್ತಿಯ ಕುದ್ದು ಪದವು ಎಂಬಲ್ಲಿರುವ ಎ. ಎಮ್ ಸ್ಟೋರ್ ಎಂಬ ಹೆಸರಿನ ದಿನಸಿ ಅಂಗಡಿಯಲ್ಲಿ ಕಳೆದ ಆ.11 ರಂದು ಅಂಗಡಿಯ ಮಾಲಿಕನೆಂದು ಹೇಳಿಕೊಳ್ಳುತ್ತಿರುವ ಆಶ್ರಫ್ ಎಂಬಾತನು ಅಪ್ರಾಪ್ತ ವಯಸ್ಸಿನ 9 ವರ್ಷ ಪ್ರಾಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ , ಪ್ರಸ್ತುತ ಆತನ ಮೇಲೆ ಪೋಸ್ಕೋ ಕಾಯಿದೆಯನ್ವಯ ಮೊಕದ್ದಮೆ ದಾಖಲಿಸಲ್ಪಟ್ಟು ಇದೀಗ ಆತನು ಕಾರಾಗ್ರಹದಲ್ಲಿರುತ್ತಾನೆ. ಈ ಘಟನೆ ನಡೆದ ದಿನದಿಂದ ಈ ಪ್ರದೇಶದಲ್ಲಿ ಆಶಾಂತಿಯ ವಾತಾವರಣವಿದ್ದು, ಯಾವುದೇ ಸಂದರ್ಭದಲ್ಲಿ ಗಲಭೆ ಉಂಟಾಗುವ ಸಂದರ್ಭವಿರುತ್ತದೆ.
ಆದುದರಿಂದ ಈ ಅಂಗಡಿಯಿಂದಾಗಿ ಸಾರ್ವಜನಿಕ ಶಾಂತಿ ಭಂಗ ಉಂಟಾಗುವ ಸಾಧ್ಯತೆಗಳಿರುವುದರಿಂದ ಈ ಅಂಗಡಿಗೆ ನೀಡಿರುವ ವ್ಯಾಪಾರ ಪರವಾನಿಗೆಯನ್ನು ತುರ್ತಾಗಿ ರದ್ದುಪಡಿಸುವಂತೆ ಸಾರ್ವಜನಿಕರು ಕೇಪು ಗ್ರಾಮ ಪಂಚಾಯತ್ಗೆ ಮನವಿ ಮಾಡಿದ್ದಾರೆ.