- Advertisement -
- Advertisement -



ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾರ್ಡ್ ಸಂಖ್ಯೆ 17ರ ನವಗ್ರಾಮದಲ್ಲಿ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿತ್ತು. ಅವ್ಯವಸ್ಥೆಯ ಮನಗಂಡ ಸ್ಥಳೀಯರು ಕಚ್ಚಾ ಚರಂಡಿಯನ್ನು(ತಾತ್ಕಾಲಿಕ) ಶ್ರಮದಾನದ ಮೂಲಕ ದುರಸ್ತಿಪಡಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.

ಸಮಾಜಮುಖಿ ಕಾರ್ಯದಲ್ಲಿ ಹಿರಿಯರಾದ ಕೆ.ಎಂ ಇಬ್ರಾಹಿಂ, ಸಂಜೀವ ನೆಲ್ಲಿಗುಡ್ಡೆ, ಹುಸೈನ್, ರಾಝೀಕ್ ವಿ.ಕೆ,ಮುಸ್ತಾಕ್ ನವಗ್ರಾಮ ಮತ್ತು ಜುನೈದ್ ಕೈಜೋಡಿಸಿದ್ದಾರೆ.

- Advertisement -