Sunday, May 5, 2024
spot_imgspot_img
spot_imgspot_img

ಆಸ್ಪತ್ರೆ ಸೇರಿದ ಮುರುಘಾ ಸ್ವಾಮಿಗೆ ಬಿಗ್‌ ಶಾಕ್‌…! ಕೋರ್ಟ್‌ ಹಾಜರಾಗುವಂತೆ ಖಡಕ್‌ ಸೂಚನೆ

- Advertisement -G L Acharya panikkar
- Advertisement -

ಚಿತ್ರದುರ್ಗ: ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮುರುಘಾ ರಾಜೇಂದ್ರ ಲಿಂಗಾಯತ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದೆ. ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

ಆದರೆ ರಾತ್ರಿ ವೇಳೆ ಅನಾರೋಗ್ಯ ಕಾಡಿದ ಹಿನ್ನೆಲೆ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರನ್ನು ಐಸಿಯು ವಾರ್ಡ್​ಗೆ ಶಿಫ್ಟ್​ ಮಾಡಿ, ಮತ್ತಷ್ಟು ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ಆರಂಭವಾಗಿತ್ತು. ಆದರೀಗ ಇವೆಲ್ಲದರ ನಡುವೆ ಮುರುಘಾ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕೂಡಲೇ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹಾಜರಾಗಬೇಕಿದೆ.

ಲೈಂಗಿಕ ದೌರ್ಜನ್ಯ ಸಂಬಂಧ ಪೋಕ್ಸೊ ಕೇಸ್​ನ ಪ್ರಮುಖ ಆರೋಪಿಯಾಗಿರುವ ಮುರುಘಾ ಸ್ವಾಮೀಜಿಗೆ ಒಂದಾದ ಬಳಿಕ ಮತ್ತೊಂದರಂತೆ ಸಂಕಷ್ಟಗಳು ಎದುರಾಗುತ್ತಿವೆ. ರಾತ್ರೋ ರಾತ್ರಿ 14 ದಿನಗಳ ನ್ಯಾಯಾಂಗ ಬಂಧನಕ್ಕೊಳಗಾದ ಸ್ವಾಮೀಜಿ ಆರೋಗ್ಯ ಹದಗೆಟ್ಟು ಆಸ್ಪತ್ರೆ ಬೆಡ್​ ಸೇರಿದ್ದಾರೆ. ಇನ್ನು ಈಗಾಗಲೇ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಯನ್ನು ಐದು ದಿನಗಳ ಕಾಲ ಕಸ್ಟಡಿಗೆ ಕೊಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.

ಕೋರ್ಟ್‌ ವಿಚಾರಿಸಿದಾಗ ಆರೋಪಿ ಆಸ್ಪತ್ರೆಗೆ ಶಿಫ್ಟ್‌ ಆದ ವಿಷಯ ತಿಳಿದು ಆರೋಪಿಯನ್ನು ಕೋರ್ಟ್​ ಕೂಡಲೇ ಆರೋಪಿಯನ್ನು ಕರೆತನ್ನಿ ಇಲ್ಲವೇ ವೈದ್ಯಕೀಯ ವರದಿ ನೀಡುವಂತೆ ಸೂಚಿಸಿದ್ದಾರೆ. ಇನ್ನು ಪೊಲೀಸರು ವರದಿಯನ್ನು ಸಲ್ಲಿಸಿದರಾದರೂ, ಖುದ್ದು ಸ್ವಾಮೀಜಿಯನ್ನೇ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಈ ಕಾರಣದಿಂದಲೇ ಬೆಂಗಳೂರಿಗೆ ಶಿಫ್ಟ್​ ಆಗಲು ಸಜ್ಜಾಗಿದ್ದ ಸ್ವಾಮೀಜಿ ಕೋರ್ಟ್​ಗೆ ತೆರಳಬೇಕಾಗಿದೆ. ಈ ಎಲ್ಲಾ ಪ್ರಕ್ರಿಯೆಗಳಿಂದ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಪ್ರಕ್ರಿಯೆ ತಡವಾಗಿದೆ.

- Advertisement -

Related news

error: Content is protected !!