Saturday, April 27, 2024
spot_imgspot_img
spot_imgspot_img

ಕಡುಬಡತನದ ಕುಟುಂಬಕ್ಕೆ ಬೆಳಕಾದ ಶಾಸಕ ಮಠಂದೂರು

- Advertisement -G L Acharya panikkar
- Advertisement -

ವಿಟ್ಲ(ನ.10): ಕಳೆದ ಕೆಲವು ದಿನಗಳ ಹಿಂದೆ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರು ಮಾಣಿಲ ಗ್ರಾಮದ ಭೇಟಿಯ ಸಂದರ್ಭದಲ್ಲಿ ಕಡುಬಡತನದಲ್ಲಿರುವ ಹಾಗು ಆ ಮನೆಯ ವ್ಯಕ್ತಿ ದಿವ್ಯಾಂಗ ಹಾಗೂ ರೋಗಗ್ರಸ್ಥನಾಗಿ ಮಲಗಿದಲ್ಲೇ ಇರುವ ಮನೆಗೆ ಭೇಟಿ ನೀಡಿದಾಗ ಆ ಮನೆಯ ಪರಿಸ್ಥಿಯನ್ನು ಕಂಡು ಮರುಗಿ ತಕ್ಷಣ ಸೋಲಾರ್ ಲೈಟ್ ಅಳವಡಿಸುತ್ತೇನೆ ಎಂದು ಭರವಸೆ ನೀಡಿದಂತೆ.

20ದಿವಸದಲ್ಲಿ ಸೋಲಾರ್ ಅಳವಡಿಸಿದರು ಹಾಗೂ ಮುಂದಿನ ದಿನಗಳಲ್ಲಿ ಮನೆಯನ್ನು ಕಟ್ಟಿಕೊಡುವ ಭರವಸೆ ನೀಡಿದರು. .ಈ ಸಂದರ್ಭದಲ್ಲಿ ಶಾಸಕರೊಂದಿಗೆ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್,ಜಿಲ್ಲಾ ಬಿಜೆಪಿ ಸಮಿತಿ ಸದಸ್ಯರಾದ ಸುರೇಶ್ ಆಳ್ವ,ಮಾಣಿಲ ಶಕ್ತಿ ಕೇಂದ್ರ ಸಂಚಾಲಕರಾದ ಗಣೇಶ್ ಭಟ್ ಮಾಣಿಲ,ಪಕ್ಷದ ಪ್ರಮುಖರಾದ ಎಸ್.ನಾರಾಯಣ್, ರಾಜೇಶ್ ಮುರುವ, ಕೃಷ್ಣಾನಂದ ಮಾಣಿಲ, ಸೆಲ್ಕೊ ಸೋಲಾರಿನ ಸುಧಾಕರ್ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಜಯಶ್ರೀ ಕೋಡಂದೂರು ,ಪೆರುವಾಯಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಗೀತಾನಂದ ಶೆಟ್ಟಿ, ಹಿಂದುಳಿದ ವರ್ಗ ಮೋರ್ಚದ ಪುತ್ತೂರು ಮಂಡಲ ಅಧ್ಯಕ್ಷರಾದ ಸುನೀಲ್ ದಡ್ಡು ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!