Friday, April 26, 2024
spot_imgspot_img
spot_imgspot_img

ವಿಟ್ಲ ಶ್ರೀ ದೇವತಾ ಸಮಿತಿಯ ಸುವರ್ಣ ಮಹೋತ್ಸವದ ಪ್ರಯುಕ್ತ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ಕೇಪು ಶ್ರೀ ಮಲರಾಯ ದೈವದ ಭಂಡಾರಕ್ಕೆ ನೂತನ ‘ಪಲ್ಲಕ್ಕಿ’ ಸಮರ್ಪಣೆ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ದೇವತಾ ಸಮಿತಿಯ ಸುವರ್ಣ ಮಹೋತ್ಸವದ ಪ್ರಯುಕ್ತ ವಿಟ್ಲ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ಕೇಪು ಶ್ರೀ ಮಲರಾಯ ದೈವದ ಭಂಡಾರಕ್ಕೆ ನೂತನ ಪಲ್ಲಕ್ಕಿಯನ್ನು ಹಸಿರುವಾಣಿ ಹೊರೆಕಾಣಿಕೆ ಮತ್ತು ಭಜನಾ ಉಲ್ಪೆ ಮೆರವಣಿಗೆ ಮೂಲಕ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಾನಕ್ಕೆ ಸಮರ್ಪಿಸಲಾಯಿತು.

ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ವಿಟ್ಲ ಪೇಟೆಯ ಮುಖಾಂತರ ಸಾವಿರಾರು ಜನಸ್ತೋಮದೊಂದಿಗೆ ಭಜನಾ ಉಲ್ಪೆ ಮೆರವಣಿಗೆಯ ಮೂಲಕ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತರಲಾಯಿತು. ಈ ಸಂದರ್ಭ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ ಮತ್ತು ವಿಟ್ಲ ಅರಮನೆಯ ಬಂಗಾರು ಅರಸರು, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಜಗನಾಥ್ ಸಾಲಿಯಾನ್ ,ಬಾಬು ಕೊಪ್ಪಳ, ಸತೀಶ್ ಆಳ್ವ ಇರಬಾಳಿಕೆ,ಮಂಗೇಶ್ ಭಟ್, ನಿತ್ಯಾನಂದ ನಾಯಕ್, ಅಶೋಕ್ ವಿಟ್ಲ ಇವರ ಸಮ್ಮುಖದಲ್ಲಿ ಪಲ್ಲಕ್ಕಿಯನ್ನು ದೇವಸ್ಥಾನಕ್ಕೆ ಸಮರ್ಪಿಸಿದರು. ಬಳಿಕ ದೇವತಾ ಸಮಿತಿಯ ಕಡೆಯಿಂದ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.

ದೇವತಾ ಸಮಿತಿಯ ಅಧ್ಯಕ್ಷರಾದ ರಾಧ ಕೃಷ್ಣ ನಾಯಕ್ , ಕಾರ್ಯದರ್ಶಿ ಗೋಕುಲ್ ದಾಸ್ ಶೆಣೈ ಮತ್ತು ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

- Advertisement -

Related news

error: Content is protected !!