Saturday, June 28, 2025
spot_imgspot_img
spot_imgspot_img

ವಿಟ್ಲ: ಪ್ರಮಾ ಅಸೋಸಿಯೇಟ್ಸ್ ವಕೀಲರ ಕಛೇರಿಯ ಶುಭಾರಂಭ

- Advertisement -
- Advertisement -

ವಿಟ್ಲ: ವಕೀಲರುಗಳಾದ ಮನೋಜ್‌ ಕುಮಾರ್‌ ಯು. ಮತ್ತು ಪ್ರಶಾಂತ್‌ ಪೂಜಾರಿ ಇವರ ಪ್ರಮಾ ಅಸೋಸಿಯೇಟ್ಸ್ ವಕೀಲರ ಕಛೇರಿಯ ಶುಭಾರಂಭವು ಡಿ.28 ಗುರುವಾರ ರಮಾನಾಥ ಕಾಂಪ್ಲೆಕ್ಸ್, 1 ನೇ ಮಹಡಿ, ಶಾಲಾ ರಸ್ತೆ ಪೊಲೀಸ್ ಠಾಣೆ ಎದುರುಗಡೆ, ವಿಟ್ಲ ಇಲ್ಲಿ ನಡೆಯಿತು.

ಮೂರುಕಜೆ ಮೈತ್ರೇಯಿ ಗುರುಕುಲಮ್‌ನ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು ದೀಪ ಪ್ರಜ್ವಲನೆಗೈದರು. ಕೆ.ನಾಗೇಶ ಶರ್ಮ ವಕೀಲರು ಪುತ್ತೂರು, ಕವನ್ ನಾೖಕ್‌ ಡಿ. ವಕೀಲರು ಪುತ್ತೂರು ಗುರುವಂದನೆ ಸ್ವೀಕರಿಸಿ ಆಶೀರ್ವದಿಸಿದರು. ಮುಖ್ಯ ಅತಿಥಿಗಳಾಗಿ ಮಂಕುಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀನಿವಾಸ ಆಚಾರ್‍ ಮಂಕುಡೆ, ನಿವೃತ್ತ ತೆರಿಗೆ ಅಧಿಕಾರಿ ಮತ್ತು ಕೇಪು ಖಂಡಿಗ ಶಿವ ಕ್ಷೇತ್ರದ ಆಡಳಿತ ಮೊಕ್ತೇಸರರಾದ ರವೀಶ ಖಂಡಿಗ, ವಿಟ್ಲ ಬ್ರಹ್ಮಶ್ರೀ ವಿವಿದೊದ್ದೇಶ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ , ಪುತ್ತೂರು ವಕೀಲರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ ಭಾಗವಹಿಸಿದ್ದರು. ಗಣೇಶ್ ಶೆಟ್ಟಿ ಬಾರೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!