ಕಚೇರಿ ಸ್ಥಳಾಂತರದ ಆದೇಶವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಈಗ ಇದ್ದಲ್ಲಿಯೇ ಕಚೇರಿ ಮುಂದವರೆಸಿ: ರೈತ ಸಂಘ ಮನವಿ






ವಿಟ್ಲ ಪುರಭವನದ ಸಮೀಪ ಕೆಪಿಟಿಸಿಎಲ್ ಉಪಕೇಂದ್ರದ ಸಮೀಪ ಕಟ್ಟಡದಲ್ಲಿ ಮೆಸ್ಕಾಂ ಕಛೇರಿ ಕಾರ್ಯನಿರ್ವಹಿಸುತ್ತಿದ್ದು, ವಿಟ್ಲ ಮೆಸ್ಕಾಂಗೆ ಸಹಾಯಕ ಅಭಿಯಂತರ ಬರುತ್ತಿದ್ದಂತೆ ಸರ್ಕಾರಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆದು ಅಲ್ಲಿ ಕಾರ್ಯಲಯ ನಡೆಸಿಕೊಂಡು ಬರಲಾಗುತ್ತಿದ್ದು. ಈಗ ಮೆಸ್ಕಾಂ ಇಲಾಖೆ ಸ್ವಂತ ಕಟ್ಟಡಕ್ಕೆ ವ್ಯವಸ್ಥೆ ಮಾಡಬೇಕೆಂದು ಅಧೀಕ್ಷಕರ ಸಮ್ಮುಖದಲ್ಲಿ ಸಾರ್ವಜನಿಕರು ಚರ್ಚಿಸಿದ್ದರು. ಈ ಬಗ್ಗೆ ಸ್ವಂತ ಕಟ್ಟಡ ಮಾಡುವಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ, ಗ್ರಾಹಕರಿಗೆ ಅನುಕೂಲವಾಗಿರುವಂತೆ ಬಸ್ ನಿಲುಗಡೆಯಾಗುವ ಸ್ಥಳ, ಪೇಟೆಯ ಹತ್ತಿರವಿರುವ ಸ್ಥಳವನ್ನು ಆಯ್ಕೆ ಮಾಡಬೇಕೆಂದು ಮಾತುಕತೆ ನಡೆಸಲಾಗಿದೆ.
ಒಂದು ವರ್ಷದ ಹಿಂದೆ ಮೆಸ್ಕಾಂ ಜನ ಸಂಪರ್ಕಕ್ಕೂ ವಿಟ್ಲ ಕೆಪಿಟಿಸಿಎಲ್ ಕಛೇರಿಯ ಹತ್ತಿರ 10 ಸೆನ್ಸ್ ಜಾಗ ಪಡೆದು ಅಲ್ಲಿ ಮೆಸ್ಕಾಂ ಸ್ವಂತ ಕಛೇರಿ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಹೊಸ ಬೆಳವಣಿಗೆಯಾಗಿ ವಿಟ್ಲ ಪೇಟೆಯಿಂದ ಹೊರಬಾಗದಲ್ಲಿ ಚಂದಳಿಕೆ ಸಮೀಪ ಕಟ್ಟಡವೊಂದಕ್ಕೆ ಸ್ಥಳಾಂತರ ಮಾಡುವುದಾಗಿ ಕೇಳಿ ಬರುತ್ತದೆ. ಆದರೆ ಈ ಪ್ರದೇಶ ಈಗಿರುವ ಮೆಸ್ಕಾಂ ಕಛೇರಿಯಿಂದ 2 ಕಿಲೋಮೀಟರ್ ದೂರವಿದ್ದು, ಇಲ್ಲಿ ಜನ ಸಂಪರ್ಕವಿಲ್ಲ, ಬಸ್ಸ್ಟಾಂಡ್ ಇಲ್ಲ, ಇದು ಇಕ್ಕಟ್ಟಾದ ಪ್ರದೇಶವಾಗಿದ್ದು ಇಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲ. ಸಾರ್ವಜನಿಕರು ಸ್ಥಳಾಂತರ ಕಛೇರಿಗೆ ವಿಟ್ಲ ಪೇಟೆಯಿಂದ ಹೋಗಲು ಬರಲು ಹತ್ತು+ ಹತ್ತು ರೂ ನೀಡಬೇಕು. ಇಂತಹ ಪ್ರದೇಶದಲ್ಲಿ ಮೆಸ್ಕಾಂ ಕಛೇರಿ ಸ್ಥಳಾಂತರ ಮಾಡಬಾರದು ಮೆಸ್ಕಾಂ ಇಲಾಖೆಗೆ ಕಟ್ಟಡ ಕಟ್ಟಲು ಆರ್ಥಿಕವಾಗಿ ಯಾವುದೇ ತೊಂದರೆ ಇದ್ದರೆ ತಾವು ಈಗಿರುವ ಕಛೇರಿಯಲ್ಲಿಯೇ 2 ವರ್ಷಗಳ ಕಾಲ ಮುಂದುವರೆಸಿ 2 ವರ್ಷದ ನಂತರ ಮೆಸ್ಕಾಂ ಇಲಾಖೆ ಆರ್ಥಿಕವಾಗಿ ಸಧೃಢವಾದಾಗ ಕೆಪಿಟಿಸಿಎಲ್ ಕಛೇರಿಯ ಹತ್ತಿರ 10 ಸೆನ್ಸ್ ಜಾಗ ಪಡೆದು ಅಲ್ಲಿ ಸ್ವಂತ ಕಟ್ಟಡ ಮಾಡಿ ಕಛೇರಿ ಪ್ರಾರಂಭಿಸಿ ಇದಕ್ಕೆ ವ್ಯತಿರಿಕ್ತವಾಗಿ ಮುಂದುವರೆದರೆ ಕರ್ನಾಟಕ ರಾಜ್ಯ ರೈತ ಸಂಘ, ಜಿಲ್ಲಾ ಸಮಿತಿ ಮತ್ತು ವಿಟ್ಲ ಗ್ರಾಹಕರು ಹಾಗೂ ಗ್ರಾಹಕರ ಒಕ್ಕೂಟದಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಚೇರಿ ಸ್ಥಳಾಂತರದ ಆದೇಶವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರ ಗಮನಕ್ಕೆ ತಂದು ಈಗ ಇದ್ದಲ್ಲಿಯೇ ಕಚೇರಿಯನ್ನು ಮುಂದವರೆಸುವಂತೆ ಮೆಸ್ಕಾಂ ಆಡಳಿತ ನಿರ್ದೇಶಕರಿಗೆ ರೈತ ಸಂಘದವರು ಮನವಿ ಮಾಡಿಕೊಂಡಿದ್ದಾರೆ.