Tuesday, July 1, 2025
spot_imgspot_img
spot_imgspot_img

ಮಂಗಳೂರು: ಭಾರತದಲ್ಲಿ ಮೊದಲ ಬಾರಿಗೆ ಭಾರತ್‌ ಕೃಷಿ ಅಭಿವೃದ್ಧಿ ರೈತ ಉತ್ಪಾದಕರ ಸಂಸ್ಥೆಯ ರೈತ ಸ್ನೇಹಿ ಹಸಿರು ಶೇರ್ ಬಾಂಡ್ ಪತ್ರ ಬಿಡುಗಡೆ

- Advertisement -
- Advertisement -

ಭಾರತ್‌ ಕೃಷಿ ಅಭಿವೃದ್ಧಿ ರೈತ ಉತ್ಪಾದಕರ ಸಂಸ್ಥೆಯ ರೈತ ಸ್ನೇಹಿ ಹಸಿರು ಶೇರ್ ಬಾಂಡ್ ಪತ್ರ ಬಿಡುಗಡೆ ಕಾರ್ಯಕ್ರಮ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮತ್ತು ವಿಟ್ಲ ಅರಮನೆಯ ಜಯರಾಮ್ ಬಳ್ಳಾಲ್ ಇವರು 500 ಮುಖಬೆಲೆಯ ಶೇರ್ ಪತ್ರವನ್ನು ಬಿಡುಗಡೆಗೊಳಿಸಿದರು.

ಭಾರತದ ದೇಶದಲ್ಲಿ ಮೊದಲ ಬಾರಿಗೆ ರೈತರ ಮತ್ತು ಗ್ರಾಹಕರನ್ನುಸಂಪರ್ಕಿಸುವ ದೇಶದ ಮೊದಲ ಸಂಸ್ಥೆ ಪಾದರ್ಪಣಗೊಂಡಿದೆ. ಕೇಂದ್ರ ಕಚೇರಿಯನ್ನು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಆರಂಭಿಸಲಾಗಿದೆ. ಹಾಗೂ ಭಾರತ ದೇಶದ ಎಲ್ಲಾ ರಾಜ್ಯಗಳ ಜಿಲ್ಲೆಗಳಲ್ಲಿ ತನ್ನ ಕಚೇರಿಗಳನ್ನು ಆರಂಭಿಸುತ್ತದೆ. ಭಾರತ್ ಸರಕಾರ ಹಾಗೂ ಕರ್ನಾಟಕ ಸರಕಾರದ ಅನುಮತಿಯನ್ನು ಪಡೆದ ಭಾರತ ಏಕೈಕ ರೈತರನ್ನು ಒಗ್ಗೂಡಿಸುವ ಸಂಸ್ಥೆಯಾಗಿರುತ್ತದೆ.

ಈಗಾಗಲೇ ರೈತರಿಗೆ ಮತ್ತು ಗ್ರಾಹಕರಿಗೆ ಸಂಪರ್ಕ ಇಲ್ಲದ ಒಂದು ಕೊಂಡಿಯಾಗಿದೆ. ಈ ಸಂಪರ್ಕವನ್ನು ಭಾರತ ಕೃಷಿ ಅಭಿವೃದ್ಧಿ ರೈತೋತ್ಪಾದಕರ ಸಂಸ್ಥೆ ಇನ್ನು ಭಾರತ ದೇಶದಲ್ಲಿ ಮಾಡಲು ಇಚ್ಛಿಸಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಗೋಪಾಲಕೃಷ್ಣ ಹೇಳಿದರು.

ಸಂಸ್ಥೆಯ ಅಧ್ಯಕ್ಷ ಸುರೇಶ್ ಕುಮಾರ್ ಎಸ್ ಸಿ , ನಿರ್ದೇಶಕರುಗಳಾದ ನಾಗೇಶ್, ರಾಜೇಶ್, ನಳಿನಾಕ್ಷಿ, ಪ್ರತಿಮಾ, ದೀಪಕ್, ದಿನೇಶ್, ಲತಾ ಎಮ್ ರೈ , ಪ್ರಸಾದ್ ಶೆಟ್ಟಿಇವರನ್ನ ಒಳಗೊಂಡ ಸಂಸ್ಥೆಯು ಭಾರತ ದೇಶದಲ್ಲಿ ಕೃಷಿಗೆ ಮತ್ತು ಕೃಷಿಕರಿಗೆ ಉತ್ತಮ ಉತ್ತೇಜನ ನೀಡುವ ಬಗ್ಗೆ ಈ ಸಂಸ್ಥೆ ಸ್ಥಾಪಿಸಲ್ಪಟ್ಟಿದೆ.

ಭಾರತ ಕೃಷಿ ಅಭಿವೃದ್ಧಿ ರೈತ ಉತ್ಪಾದಕರ ಸಂಸ್ಥೆ ಕೇಂದ್ರ ಕಚೇರಿ ಬಲ್ಮಠ ಮಂಗಳೂರಿನಲ್ಲಿ ಕಾರ್ಯಚರಿಸುತ್ತಿದ್ದು ಪ್ರಾದೇಶಿಕ ಕಚೇರಿ ಬೆಂಗಳೂರು, ಮುಂಬೈ, ಹಾಗೂ ತ್ರಿಶೂರ್‌ನಲ್ಲಿ ಕಾರ್ಯಚರಿಸುತ್ತಿದೆ.

- Advertisement -

Related news

error: Content is protected !!