- Advertisement -
- Advertisement -
ವಿಟ್ಲ: ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ) ಇದರ 12ನೇ ಕಂಬಳಬೆಟ್ಟು ಶಾಖೆಯ ಉದ್ಘಾಟನಾ ಸಮಾರಂಭವು ಸೆ.03ರಂದು ಬೆಳಿಗ್ಗೆ 10.00ಗಂಟೆಗೆ ದರ್ಬಾರ್ ಕಾಂಪ್ಲೆಕ್ಸ್ ಕಂಬಳಬೆಟ್ಟಿನಲ್ಲಿ ನಡೆಯಲಿದೆ.
ಶಾಖೆಯ ಉದ್ಘಾಟನೆಯನ್ನು ಕಲ್ಬುರ್ಗಿ ಮಠ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠಾಧಿಪತಿ ಡಾ| ಪ್ರಣಾವನಂದ ರಾಮ್ ಸ್ವಾಮೀಜಿ ನೆರವೇರಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಸಜೀಪ ಮುನ್ನೂರು ಮೂರ್ತೆದಾರರ ಸೇ.ಸ.ಸಂಘ ಅಧ್ಯಕ್ಷ ಕೆ.ಸಂಜೀವ ಪೂಜಾರಿಯವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಕರ್ನಾಟಕ ಸರಕಾರದ ಮಾಜಿ ಸಚಿವ ಬಿ.ರಮಾನಾಥ ರೈ, ವಿಟ್ಲ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಪ್ರಕಾಶ್ ನಾಯಕ್ ಎನ್., ಮೂರ್ತೆದಾರರ ಸೇ.ಸ.ಸಂಘ ವಿಟ್ಲ ಇದರ ಮಾಜಿ ಅಧ್ಯಕ್ಷ ಜನಾರ್ಧನ ಪೂಜಾರಿ ಕೆ.ಕೆ, ದರ್ಬಾರ್ ಕಾಂಪ್ಲೆಕ್ಸ್ ಕಂಬಳಬೆಟ್ಟು ಇದರ ಮಾಲಕ ಮೊಯಿದ್ದೀನ್ ಹಾಜಿ ಭಾಗವಹಿಸಲಿದ್ದಾರೆ.
- Advertisement -