ವಿಟ್ಲ: ಮಂಗಳೂರು ರಸ್ತೆಯ ಬೊಬ್ಬೆಕ್ಕೇರಿಯಲ್ಲಿ ನೂತನವಾಗಿ ಪ್ರಾರಂಭವಾಗುವ ಸಾಯಿ ಗಣೇಶ್ ಆಟೋ ಗ್ಯಾಸ್ AEGIS LOGISTICS Ltd. ಇದರ ಉದ್ಘಾಟನಾ ಸಮಾರಂಭವು ಸೆ.8 ರಂದು ಬೆಳಿಗ್ಗೆ 9.30 ಕ್ಕೆ ನಡೆಯಲಿದೆ.
ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆಯ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್ ಕೃಷ್ಣ ಭಟ್ ದೀಪ ಪ್ರಜ್ವಲನೆಗೈದು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. AEGIS LOGISTICS Ltd.ನ ಜನರಲ್ ಮ್ಯಾನೇಜರ್ ಸುಕೇಶ್ ಕುಟ್ಟಿ, AEGIS LOGISTICS Ltd.ಬೆಂಗಳೂರಿನ ಪ್ರಾದೇಶಿಕ ವ್ಯವಸ್ಥಾಪಕ ಅರವಿಂದ್ ಕೆ.ಗುಪ್ತ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಟ್ಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಾಗರಾಜ್ ಎಚ್.ಇ, ವಿಟ್ಲ ಪ.ಪಂ.ಮುಖ್ಯ ಅಧಿಕಾರಿ ಗೋಪಾಲ ನಾಯ್ಕ, ಕೋಡಪದವು ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯನ್.ಕೆ ಮಹಾಭಲೇಶ್ವರ ಭಟ್, ಎಮ್.ನಿತ್ಯಾನಂದ ನಾಯಕ್ ಉದ್ಯಮಿಗಳು, ನಾಯಕ್ಸ್ ಫ್ಯಾಮಿಲಿ, ವಿಟ್ಲ, ಹೊರಿಝಾನ್ ಪಬ್ಲಿಕ್ ಸ್ಕೂಲ್ ಮೇಗಿನಪೇಟೆ ಸಂಚಾಲಕ ಮೊಹಮ್ಮದ್ ಇಕ್ಬಾಲ್ ಹಾನೆಶ್ಟ್, ವಿಟ್ಲ ಪ.ಪಂ.ಸದಸ್ಯ ಹರೀಶ್ ಸಿ.ಎಚ್, ವಿಟ್ಲ ಬಿ.ಎಮ್.ಎಸ್, ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಎನ್.ವಸಂತ್ ಶಿವಾಜಿನಗರ, ವಿಟ್ಲ ಫೆಡರೇಶನ್ ಆಫ್ ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ರಮೇಶ್ ಶಿವಾಜಿನಗರ, ಹಿರಿಯ ರಿಕ್ಷಾ ಚಾಲಕ ಆರಂಗಳ ಇಸುಫ್ ಕುಳಾಲು ಭಾಗವಹಿಸಲಿದ್ದಾರೆ.