- Advertisement -
- Advertisement -




ವಿಟ್ಲ: ವ್ಯಕ್ತಿಯೋರ್ವರು ನಲ್ವತ್ತು ಅಡಿ ಎತ್ತರದ ಮರವೇರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕ ಸ್ಥಳೀಯ ನಿವಾಸಿ ಜಾರಪ್ಪ ನಾಯ್ಕ (60) ಎಂದು ಗುರುತಿಸಲಾಗಿದೆ.
ಮನೆಯಿಂದ ಎಂದಿನಂತೆ ರಘುರಾಮ ತಂತ್ರಿಯವರ ತೋಟದ ಕೆಲಸಕ್ಕೆ ಹೋಗಿದ್ದರೂ ಅಲ್ಲಿಗೆ ತಲುಪಿಲ್ಲ ,ಕೆಲಸಕ್ಕೆ ಬಂದಿಲ್ಲದ ಕಾರಣ ಮನೆಯವರಲ್ಲಿ ವಿಚಾರಿಸಿದಾಗ ಬೆಳಿಗ್ಗೆಯೇ ಹೋಗಿದ್ದಾರೆ ಎಂದು ತಿಳಿಸಿದ್ದ ಕಾರಣ ಹುಡುಕಾಡಿದಾಗ ತೋಟದೊಳಗಿನ ಸುಮಾರು ನಲ್ವತ್ತು ಅಡಿ ಎತ್ತರದ ಮರದಲ್ಲಿ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಬಳಿಕ ವಿಟ್ಲ ಪೊಲೀಸರ ಸಮಕ್ಷಮದಲ್ಲಿ ಮೃತ ಶರೀರವನ್ನು ಕೆಳಕ್ಕಿಳಿಸಿದರು. ಈ ಘಟನೆಯ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -