Saturday, June 28, 2025
spot_imgspot_img
spot_imgspot_img

ವಿಟ್ಲದ ಹಳೆಯ ಸ್ನೇಹಿತರನ್ನು ಭೇಟಿಯಾದ ಯು.ಟಿ.ಖಾದರ್- ತಂದೆ ಫರೀದ್ ಕಾರು ಚಾಲಕನ ಸಹೋದರರ ಜೊತೆ ಖಾದರ್ ಖಾಸ್ ಬಾತ್

- Advertisement -
- Advertisement -

ವಿಟ್ಲ: ಮಾಜಿ ಸಚಿವರು, ಮಂಗಳೂರು ಶಾಸಕರಾದ ಯು.ಟಿ.ಖಾದರ್ ಸಣ್ಣದರಲ್ಲಿ ವಿಟ್ಲ ಸಮೀಪದ ಪರಿಯಾಲ್ತಡ್ಕದಲ್ಲಿ ಬಾಲ್ಯ ಕಳೆದವರು. ಇಂದು (16/12/2020) ವಿಟ್ಲ ಬ್ಲಾಕ್ ಕಾಂಗ್ರೆಸ್ ಕಛೇರಿಗೆ ಆಗಮಿಸಿದ್ದ ಯು.ಟಿ.ಖಾದರ್ ವಿಟ್ಲ-ಶಾಲಾ ರಸ್ತೆಯಲ್ಲಿ ಕಾರಲ್ಲಿ ಪ್ರಯಾಣಿಸುತ್ತಿದ್ದಾಗ ಬಾಲ್ಯದಲ್ಲಿ ಒಡನಾಟ ಇಟ್ಟುಕೊಂಡಿದ್ದ ಸ್ನೇಹಿತರನ್ನು ಕಂಡು ಕಾರು ನಿಲ್ಲಿಸಿ ಉಭಯ ಕುಶಲೋಪರಿ ಮಾತನಾಡಿದರು.

ಖಾದರ್ ತಂದೆ ಯು.ಟಿ.ಫರೀದ್ ಅವರ ಕಾರು ಚಾಲಕರಾಗಿದ್ದ ಗಂಗಾಧರ ಶೆಟ್ಟಿ ಅವರ ಸಹೋದರ ಶ್ರೀ ಗಣೇಶ್ ಝೆರಾಕ್ಸ್ ನ ಭಾಸ್ಕರ ಶೆಟ್ಟಿ ಅಂಗಡಿಗೆ ಯು.ಟಿ.ಖಾದರ್ ಭೇಟಿ ನೀಡಿದರು. ಅಲ್ಲಿ ಮತ್ತೋರ್ವ ಸಹೋದರ ರತ್ನಾಕರ ಶೆಟ್ಟಿ ಕೂಡಾ ಇದ್ದರು. ಈ ಸಂದರ್ಭ ಭಾಸ್ಕರ ಶೆಟ್ಟಿ ಖಾದರ್ ಅವರ ತಲೆ, ಮುಖ ನೇವರಿಸಿ ಆಶೀರ್ವದಿಸಿದರು. ಭಾಸ್ಕರವರ ಪತ್ನಿ ಉದಯ ಟೀಚರ್, ಪುತ್ರ ಮುರಳಿ ಇದ್ದರು.

- Advertisement -

Related news

error: Content is protected !!