Tuesday, April 30, 2024
spot_imgspot_img
spot_imgspot_img

ಪುತ್ತೂರು : ಕಟ್ಟಡವೊಂದರ ಬಳಿ ವ್ಯಕ್ತಿಯ ಶವ ಪತ್ತೆ..!

- Advertisement -G L Acharya panikkar
- Advertisement -

ಪುತ್ತೂರು: ಕಲ್ಲಾರೆ ಕಟ್ಟಡವೊಂದರ ಬಳಿ ಉಪ್ಪಿನಂಗಡಿ ಮೂಲದವರೆನ್ನಲಾದ ಗುಜುರಿ ಹೆಕ್ಕುತ್ತಿದ್ದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ನಡೆದಿದೆ.

ಉಪ್ಪಿನಂಗಡಿ ಮೂಲದ ಮಂಜುನಾಥ್‌ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಕಲ್ಲಾರೆ ನವಾಜ್ ಕಾಂಪ್ಲೆಕ್ಸ್‌ನ ಎದುರು ಅವರ ಮೃತ ದೇಹ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಂಜುನಾಥ್ ಅವರು ನಿತ್ಯ ಗುಜುರಿ ಹೆಕ್ಕಿ ಜೀವನ ಸಾಗಿಸುತ್ತಿದ್ದು, ಕಲ್ಲಾರೆ ಕಟ್ಟಡದ ಬಳಿಯೇ ಅವರು ಮಲಗುತ್ತಿದ್ದರು. ಮೂರುನಾಲ್ಕು ತಿಂಗಳ ಹಿಂದೆ ಅವರಿಗೆ ಪಕ್ಷಪಾತವಾಗಿ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಚೇತರಿಕೆಗೊಂಡು ಮತ್ತೆ ತನ್ನ ಕಾರ್ಯಕ ಆರಂಭಿಸಿದ್ದರು. ಇದೀಗ ಅವರು ಮೃತಪಟ್ಟಿದ್ದಾರೆ.

- Advertisement -

Related news

error: Content is protected !!