- Advertisement -
- Advertisement -



ವಿಟ್ಲ : ಉಕ್ಕುಡ ಒತ್ತೆಸಾರ್ ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಪೂರ್ವ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಇಂದು ನಡೆಯಿತು.


ಇಂದು ಬೆಳಿಗ್ಗೆ ದಿ. ಶ್ರೀ ಪೂವಪ್ಪ ಪೂಜಾರಿ ಒತ್ತೆಸಾರ್ ಉಕ್ಕುಡ, ಇವರ ಮನೆಯಿಂದ ಶ್ರೀ ರುದ್ರಚಾಮುಂಡಿ ದೈವದ ಸಾನಿಧ್ಯವನ್ನು ಭವ್ಯವಾದ ಮೆರವಣಿಗೆಯಲ್ಲಿ ತಂದು, ಜೊತೆಗೆ ಮಲರಾಯ, ಪಿಲಿಚಾಮುಂಡಿ, ಕಕ್ಕರಿ ಚಾಮುಂಡಿ ಮತ್ತು ಇತರ ಸಪರಿವಾರ ದೈವಗಳನ್ನು ಒತ್ತೆಸಾರ್ ತರವಾಡು ಮನೆಯಲ್ಲಿ ನಿರ್ಮಿಸಿದ ಬಾಲಾಲಯದಲ್ಲಿ ಕುಂಟು ಕುಡೇಲು ಶ್ರೀ ರಘುರಾಮ ತಂತ್ರಿಯವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು.




- Advertisement -








