Saturday, April 20, 2024
spot_imgspot_img
spot_imgspot_img

ವಿಟ್ಲ: ಹತ್ತು ಗ್ರಾಮದ ಸಮಸ್ತರಿಂದ ವಿನೋದ್ ಕುಮಾರ್ ರೆಡ್ಡಿಯವರಿಗೆ ಗೌರವಪೂರ್ಣ ಬೀಳ್ಕೊಡಿಗೆ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ವಿನೋದ್ ಕುಮಾರ್ ರೆಡ್ಡಿ ಅವರಿಗೆ ಗೌರವಪೂರ್ಣ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ವಿಟ್ಲ ಪೊಲೀಸ್ ಠಾಣೆಯಲ್ಲಿ ಹತ್ತು ಗ್ರಾಮದ ಸಮಸ್ತರು ಹಾಗೂ ಅಭಿಮಾನಿಗಳು ಸೇರಿಕೊಂಡು ಗೌರವ ಪೂರ್ಣ ಬೀಳ್ಕೊಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಸುಮಾರು ಒಂದೂವರೆ ವರ್ಷಗಳ ಕಾಲ ವಿಟ್ಲ ಠಾಣೆಯಲ್ಲಿ ದಕ್ಷ ಅಧಿಕಾರಿಯಾಗಿ ವಿನೋದ್ ಕುಮಾರ್ ರೆಡ್ಡಿಯವರು ಅಕ್ರಮ ಚಟುವಟಿಕೆ ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಸಮಾಜಘಾತುಕರನ್ನು ಸದೆ ಬಡಿಯುವಲ್ಲಿ ಯಶಸ್ವಿಯಾಗಿದ್ದರು.

ಅಂತೆಯೇ ಈ ವಿಟ್ಲ ಠಾಣೆಯ ನೂತನ ಇನ್ಸ್ಪೆಕ್ಟರ್ ನಾಗರಾಜ್ ಹೆಚ್ ಇ ಅವರನ್ನು ಹೃರ್ತ್ಪೂವಕವಾಗಿ ಸ್ವಾಗತಿಸಲಾಯಿತು.

ಪುಷ್ಪರಾಜ್ ಚೌಟ ಮಾಣಿ, ದಯಾನಂದ ಶೆಟ್ಟಿ ಉಜಿರೆಮಾರು, ಸತೀಶ್ ಆಳ್ವ, ಅಭಿಷೇಕ್ ರೈ, ಶಿವಪ್ರಸಾದ್ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ನರಸಿಂಹ ಮಾಣಿ, ರಘುರಾಮ ಶೆಟ್ಟಿ ಕನ್ಯಾನ, ವಿನೋದ್ ಶೆಟ್ಟಿ ಪಟ್ಲ, ರಾಜಾರಾಮ್ ಹೆಗ್ಡೆ, ಅರವಿಂದ ರೈ, ಪ್ರಶಾಂತ್ ಶೆಟ್ಟಿ ಅಗರಿ, ನಾರಾಯಣ ಶೆಟ್ಟಿ ತೋಟ, ಸನತ್ ರೈ, ದಿನೇಶ್ ಆಳ್ವ, ದೇವಿಪ್ರಸಾದ್ ಶೆಟ್ಟಿ, ಹರೀಶ್ ಶೆಟ್ಟಿ, ಜಯಂತ್ ಪಿ, ಸತೀಶ್ ಭಟ್, ಜಯ ಕೊಟ್ಟಾರಿ, ತನಿಯಪ್ಪ ಗೌಡ, ಹರ್ಷೇಂದ್ರ ಶೆಟ್ಟಿ, ದೇವಪ್ಪ ಶೇಕ, ಸದಾಶಿವ ಶೆಟ್ಟಿ, ಅಮರೇಶ, ಚೇತನ್, ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!