Thursday, May 2, 2024
spot_imgspot_img
spot_imgspot_img

ಯಕ್ಷಮಿತ್ರರು ವಿಟ್ಲ ವಾಟ್ಸಾಪ್ ಬಳಗ ಸಹಕಾರದೊಂದಿಗೆ ಸ್ವಾತಂತ್ರೋತ್ಸವದ ಪ್ರಯುಕ್ತ ವಿಟ್ಲ ಯಕ್ಷೋತ್ಸವ ಕಾರ್ಯಕ್ರಮ

- Advertisement -G L Acharya panikkar
- Advertisement -

ಯಕ್ಷಮಿತ್ರರು ವಿಟ್ಲ ವಾಟ್ಸಾಪ್ ಬಳಗ ಇದರ ಸಹಕಾರದೊಂದಿಗೆ ಸ್ವಾತಂತ್ರೋತ್ಸವದ ಪ್ರಯುಕ್ತ ವಿಟ್ಲ ಯಕ್ಷೋತ್ಸವ ಕಾರ್ಯಕ್ರಮ ಜೇಸಿ ಪೆವಿಲಿಯನ್ ಸಭಾಂಗಣ ಜೇಸಿಸ್ ಆಂಗ್ಲಮಾಧ್ಯಮ ಶಾಲೆ ವಿಟ್ಲದಲ್ಲಿ ನಡೆಯಲಿದೆ.

ಅಪರಾಹ್ನ 1.30 ಕ್ಕೆ ತೆಂಕು ಬಡಗುತಿಟ್ಟಿನ ದ್ವಂದ್ವ ಭಾಗವತಿಕೆಯೊಂದಿಗೆ ವಾಚಿಕೊತ್ಸವ- ಮಾತಿನ ವೈಭವ ನಡೆಯಲಿದೆ.

ಸಂಜೆ 7.30 ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ, ರವಿಚಂದ್ರ ಕನ್ನಡಿಕಟ್ಟೆ ಹಾಗೂ ಶಿವಪ್ರಸಾದ್ ಎಡಪದವು ಸಾರಥ್ಯದಲ್ಲಿ ಯಕ್ಷಲೋಕದಲ್ಲಿ ಐತಿಹಾಸಿಕ ದಾಖಲೆ ಮೂಡಿಸಿದ ಅನಂತರಾಮ ಬಂಗಾಡಿ ವಿರಚಿತ ಕಾಡಮಲ್ಲಿಗೆ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.
ಬಳಿಕ ಯಕ್ಷಲೋಕದ ಮಹಾನ್ ದಿಗ್ಗಜರಿಗೆ ಕಲಾಪೋಷಕ ಗೌರವ ಪುರಸ್ಕಾರ, ಹುಟ್ಟೂರ ಗೌರವ ಪುರಸ್ಕಾರ, ಗೌರವ ಪುರಸ್ಕಾರಗಳನ್ನೊಳಗೊಂಡ ಉತ್ಸವ ಗೌರವಾರ್ಪಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶ್ರೀ ಭಗವತೀ ಸಸಿಹಿತ್ಲು ಮೇಳದಲ್ಲಿ ಸುದೀರ್ಘ ತಿರುಗಾಟ ನಡೆಸಿ ಅಕಾಲಿಕ ಮರಣ ಹೊಂದಿದ ಜಗದೀಶ್ ನಲ್ಕ ಇವರ ಕುಟುಂಬಕ್ಕೆ ಯಕ್ಷ ಸಾಂತ್ವನ ನಿಧಿ ಸಮರ್ಪಣೆ ನಡೆಯಲಿದೆ.

- Advertisement -

Related news

error: Content is protected !!