Friday, April 26, 2024
spot_imgspot_img
spot_imgspot_img

ವಿಟ್ಲದ ಯುವಕನ ಕಿಡ್ನಾಪ್ ಪ್ರಕರಣದ ಕ್ರಿಮಿನಲ್ ಸೂತ್ರಧಾರಿ ಅರೆಸ್ಟ್.

- Advertisement -G L Acharya panikkar
- Advertisement -

ವಿಟ್ಲ: ಪ್ರೀತಿಸಿ ಮದುವೆಯಾದ ಎಂಬ ಕಾರಣಕ್ಕಾಗಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಕಿಡ್ನಾಪ್ ಮಾಡಲು ಯತ್ನಿಸಿ ವಿಫಲವಾದ ಘಟನೆಗೆ ಸಂಬಂಧಿಸಿದಂತೆ ವಿಟ್ಲ ಎಸ್.ಐ ವಿನೋದ್ ರೆಡ್ಡಿ ಒರ್ವ ಆರೋಪಿಯನ್ನು ಬಂಧಿಸಿದ್ದು ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದ್ದು ಈತನಿಗೆ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಹಳೆಯ ಆರೋಪಿ ಸಾಧಿಕ್ ಯಾನೆ ಬ್ಲೇಡ್ ಸಾಧಿಕ್ ಬಂಧಿತ ಆರೋಪಿ.ಪುಣಚ ಗ್ರಾಮದ ನಿವಾಸಿ ಅಬ್ದುಲ್ ಬಶೀರ್ ಎಂಬಾತನನ್ನು ಜುಲೈ 29 ರಂದು ಅಪಹರಿಸಿ ವಿಫಲರಾಗಿದ್ದರು.

ಘಟನೆಯ ವಿವರ
ಜುಲೈ29 ರಂದು ಸುಮಾರು 2.30 ರವೇಳೆ ಬಕ್ರೀದ್ ಹಬ್ಬಕ್ಕೆ ಬಟ್ಟೆ ತೆಗೆದುಕೊಳ್ಳುಉದ್ದೇಶದಿಂದ ಅಬ್ದುಲ್ ಬಶೀರ್ ವಿಟ್ಲದಲ್ಲಿರುವ ಎಂಪಯಾರ್ ಮಾಲ್ ಗೆ ಬಂದಿದ್ದರು.
ಅಸಮಯದಲ್ಲಿ ಇವನಿಗೆ ಪರಿಚಯದ ಸಿದ್ದಿಕ್ ಎಂಬಾತ ಮಾತನಾಡುವ ಉದ್ದೇಶದಿಂದ ನನ್ನ ಜೊತೆ ಬಾ ಎಂದು ಕಾರಿನ ಬಳಿ ಕರೆದುಕೊಂಡು ಹೋಗಿ ಸ್ಕಾರ್ಪಿಯೋ ಕಾರಿನಲ್ಲಿ ಕುಳಿತುಕೊಳ್ಳಲು ಹೇಳಿದಾಗ ಅದೇ ಕಾರಿನಲ್ಲಿ ಹಳೆಯ ಆರೋಪಿ ಸಾಧಿಕ್ ಯಾನೆ ಬ್ಲೇಡ್ ಸಾದಿಕ್ ಕಾರಿನೊಳಗೆ ಇದ್ದ.
ಆತನನ್ನು ಗಮನಿಸಿ ಕಾರು ಹತ್ತಲು ಬಶೀರ್ ಹಿಂಜರಿದಾಗ ಇಬ್ಬರು ಸೇರಿ ಬಶೀರ್ ನನ್ನು ಕಾರಿನೊಳಗೆ ಬಲವಂತವಾಗಿ ದೂಡಿ ಕೂರಿಸಿಕೊಂಡು ಪುತ್ತೂರು ಕಡೆಗೆ ಹೋದರು.
ಅವೇಳೆ ಬೊಬ್ಬೆ ಹೊಡೆದರೆ ಈಗಲೇ ಕೊಂದು ಬಿಡುವುದಾಗಿ ಬಶೀರ್ ನ ಕೆನ್ನೆಗೆ ಬ್ಲೇಡ್ ಸಾಧಿಕ್ ಹೊಡೆದಿದ್ದ.
ನಂತರ ಕಾರು ಕಂಬಳಬೆಟ್ಟು ಎಂಬಲ್ಲಿ ಯಾವುದೋ ಕಾರಣಕ್ಕೆ ನಿಲ್ಲಿಸಿದಾಗ ಬಶೀರ್ ಕಾರಿನಿಂದ ಜಿಗಿದು ತಪ್ಪಿಸಿಕೊಂಡು ಪರಾರಿಯಾಗಿ ಮನೆಗೆ ಬಂದಿದ್ದ.
ಅ ಬಳಿಕವೂ ಈತ ಮೊಬೈಲ್ ಗೆ ಸಂದೇಶ ಮತ್ತು ಕರೆ ಮಾಡಿ ಕೊಲ್ಲವುದಾಗಿ ಬೆದರಿಕೆ ಹಾಕಿದ್ದ..
ಬಶೀರ್ ಅಬೂಬಕರ್ ಎಂಬವರ ಮಗಳನ್ನು ಪ್ರೀತಿಸಿ ಮದುವೆಯಾದ ವಿಚಾರದಲ್ಲಿ ಸಾಧಿಕ್ ಮತ್ತು ಸಿದ್ದಿಕ್ ಪೂರ್ವ ದ್ವೇಷ ಹೊಂದಿ ಕೊಲ್ಲುವ ಉದ್ದೇಶದಿಂದ ಕಿಡ್ನಾಪ್ ಮಾಡಿದ್ದಾನೆ ಎಂದು ವಿಟ್ಲ ಠಾಣೆಯಲ್ಲಿ ತಡವಾಗಿ ದೂರು ನೀಡಿದ್ದ
. ದೂರಿನ ಹಿನ್ನೆಲೆಯಲ್ಲಿ ಕಾರ್ಯಚರಣೆ ಮಾಡಿದ ವಿಟ್ಲ ಎಸ್. ಐ.ವಿನೋದ್ ರೆಡ್ಡಿ ಅವರು ಇಂದು ಬೆಳಿಗ್ಗೆ ವಿಟ್ಲ ದಲ್ಲಿ ಬಂಧಿಸಿದ್ದಾರೆ.


ಈತನ ಮೇಲೆ ಒಟ್ಟು 14 ಪ್ರಕರಣ
ವಿಟ್ಲ, 10 ಪುತ್ತೂರು ಗ್ರಾಮಾಂತರ. 1 ಪುತ್ತೂರು ಟೌನ್ 2 ಉಪ್ಪಿನಂಗಡಿ 1 ಪ್ರಕರಣಗಳು ಸೇರಿದಂತೆ 14 ಪ್ರಕರಣ ಗಳು ಈತನ ಮೇಲೆ ಇದೆ.

ಪುತ್ತೂರು ವ್ಯಕ್ತಿಯೋರ್ವನನ್ನು ಶೂಟ್ ಔಟ್ ಮಾಡಿ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿ ಕಳೆದ ತಿಂಗಳಷ್ಟೆ ಈತ ಬಂದಿದ್ದ.

- Advertisement -

Related news

error: Content is protected !!