

ವಿಟ್ಲ: ರಸ್ತೆ ಸುರಕ್ಷತೆ, ಮಾದಕವಸ್ತು ಹಾಗೂ ಪೋಕ್ಸೋ ಕಾನೂನು ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸರಕಾರಿ ಐಟಿಐವಿಟ್ಲ ಸಂಸ್ಥೆಯಲ್ಲಿ ಕಾರ್ಯಾಗಾರ ಯಶಸ್ವಿಯಾಗಿ ಸಂಪನ್ನವಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ರಸ್ತೆ ನಿಯಮಗಳ, ಮಾದಕವಸ್ತು ಹಾಗೂ ಪೋಕ್ಸೋ ಕಾನೂನಿನ ಪ್ರಾಮುಖ್ಯತೆ ಬಗ್ಗೆಅರಿವು ಉಂಟುಮಾಡುವ ನಿಟ್ಟಿನಲ್ಲಿಈ ಕಾರ್ಯಕ್ರಮವು ರೂಪುಗೊಂಡಿತು.

ಸಂಸ್ಥೆಯ ಪ್ರಾಂಶುಪಾಲ ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿಟ್ಲ ಠಾಣೆಯ ಉಪನಿರೀಕ್ಷಕ ರತ್ನ ಕುಮಾರ್ ದೀಪ ಪ್ರಜ್ವಲಿಸಿದರು ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಹರೀಶ್ ,ಹೆಡ್ ಕಾನ್ಸ್ಟೇಬಲ್ಆರಕ್ಷಕ ಠಾಣೆ ವಿಟ್ಲರವರು ಮಾತನಾಡಿ “ಪ್ರತಿದಿನ ರಸ್ತೆಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಪ್ರಮುಖ ಕಾರಣ ಪರವಾನಿಗೆ ಇಲ್ಲದ ಚಾಲನೆ ಮತ್ತು ನಿಯಮ ಉಲ್ಲಂಘನೆ. ಯುವಜನರು ಈ ಬಗ್ಗೆ ಹೆಚ್ಚಿನ ಜಾಗೃತಿಯಿಂದ ನಡೆದುಕೊಳ್ಳಬೇಕು” ಎಂದು ಹೇಳಿದರು.


ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಬಳಕೆಯ ಅಗತ್ಯತೆ, ಸೀಟ್ ಬೆಲ್ಟ್ ಧರಿಸುವ ಮಹತ್ವ, ಮದ್ಯಪಾನ ಮತ್ತು ಚಾಲನೆಯ ಭಯಾನಕ ಪರಿಣಾಮಗಳ ಬಗ್ಗೆ ,ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದರೊಂದಿಗೆ ಇತರರಿಗೂ ತಿಳುವಳಿಕೆ ನೀಡುವುದು ಹಾಗೂ ಪೋಷಕ ಹಾಗೂ ಶಿಕ್ಷಕರೊಂದಿಗೆ ಸಹಕರಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಮಾದಕ ವಸ್ತುವಿನಿಂದ ಅನೇಕ ದೈಹಿಕ, ಮಾನಸಿಕ, ರೋಗಗಳ ಬಗ್ಗೆ ಕೊನೆಗೆ ಸಾವಿನ ಅಪಾಯ ಕುಟುಂಬದ ಮೇಲೆ ಪರಿಣಾಮ ಸಾಮಾಜಿಕ ಸಂಬಂಧ ಹಾಗೂ ಉದ್ಯೋಗದ ಮೇಲೆ ಪರಿಣಾಮ ಬಗ್ಗೆ ವಿಸ್ತೃತ ಅರಿವನ್ನು ಮೂಡಿಸಿದರು. ತದನಂತರ ನೈಜ ಘಟನೆಗಳ ಆಧಾರದ ಮೇಲೆ ನಡೆದ ಚರ್ಚೆ ಬಹಳ ಪರಿಣಾಮಕಾರಿಯಾಗಿತ್ತು.

ವಿದ್ಯಾರ್ಥಿ ಹಿತೇದ್ ಪ್ರಾರ್ಥನೆ ಮಾಡಿದರು. ಕಿರಿಯ ತರಬೇತಿ ಅಧಿಕಾರಿ ಶ್ರೀಮತಿ ರತಿ ವಿ ಸ್ವಾಗತಿಸಿದರು, ಜೊಯ್ಲಿನ್ ಕ್ರಾಸ್ತ ನಿರೂಪಿಸಿದರು. ಶರತ್ ಕುಮಾರ್ ಎಸ್ಎಚ್ ವಂದಿಸಿದರು.ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.