Friday, June 27, 2025
spot_imgspot_img
spot_imgspot_img

ವಿಟ್ಲ: ಮನೆಗೆ ನುಗ್ಗಿ ಮಹಿಳೆಯ ಮಾಂಗಲ್ಯ ಕಸಿದು ಪರಾರಿ ಪ್ರಕರಣ; ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು

- Advertisement -
- Advertisement -

ವಿಟ್ಲ: ಹಾಡುವಾಗಲೇ ಮನೆಗೆ ನುಗ್ಗಿ ಮಹಿಳೆಯೊಬ್ಬರ ಮಾಂಗಲ್ಯವನ್ನು ಎಳೆದೊಯ್ದ ಘಟನೆ ಕಾಡುಮಠ ಎಂಬಲ್ಲಿ ನಡೆದಿದ್ದು, ಆರೋಪಿಯ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಮಾನ್ಯ ನ್ಯಾಯಾಲಯವು ಪುರಸ್ಕರಿಸಿ ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಆರೋಪಿಯನ್ನು ಸುಜಿತ್ ಕಾಡುಮಠ ಎಂದು ಗುರುತಿಸಲಾಗಿದೆ.

ನ.13 ರಂದು ಸಂಜೆ ಸಮಯದಲ್ಲಿ ಬಂದ ವ್ಯಕ್ತಿ ಮಹಿಳೆಯ ಮುಖಕ್ಕೆ ಬಟ್ಟೆ ಹಾಕಿ ಕರಿಮಣಿಯನ್ನು ಎಳೆದು ಪರಾರಿಯಾಗಿದ್ದಾನೆ ಎಂಬಿತ್ಯಾದಿಯಾಗಿ ವಿಟ್ಲ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ದೂರಿನ ಆಧಾರದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ಬಂಟ್ವಾಳ ನ್ಯಾಯಾಲಯಕ್ಕೆ ಇಂದು ಹಾಜರು ಪಡಿಸಿದಾಗ ಆರೋಪಿ ಪರ ವಕೀಲರು ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಮಾನ್ಯ ನ್ಯಾಯಾಲಯವು ಆರೋಪಿಯನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕೆಂದು ಆದೇಶ ನೀಡಿರುತ್ತದೆ.

ಆರೋಪಿಯ ಪರವಾಗಿ ವಕೀಲರಾದ ವಿಮಲೇಶ್ ಕೆ ಎಸ್, ಮನೋಜ್ ಕುಮಾರ್ ಯು, ಮತ್ತು ವಿನೋದ್ ವಿಷ್ಣುನಗರ ವಾದಿಸಿದರು.

- Advertisement -

Related news

error: Content is protected !!