Friday, May 17, 2024
spot_imgspot_img
spot_imgspot_img

ವಿಟ್ಲ: ಶ್ರೀ ದುರ್ಗಾಂಬಿಕ ಹಾಗೂ ಶ್ರೀ ಜಗದಾಂಬಿಕ ಸ್ವಸಹಾಯ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ(ರಿ) ವಿಟ್ಲ ವಲಯದ ಸಹಕಾರದೊಂದಿಗೆ ಉಕ್ಕುಡ ಒಕ್ಕೂಟದ ಶ್ರೀ ದುರ್ಗಾಂಬಿಕ ಸ್ವಸಹಾಯ ಸಂಘದ 10ನೇ ಹಾಗೂ ಶ್ರೀ ಜಗದಾಂಬಿಕ ಸ್ವಸಹಾಯ ಸಂಘದ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಆಲಂಗಾರು ಮಾಯಿಲಪ್ಪ ಗೌಡ ಇವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶ್ರೀ ಮೂಕಾಂಬಿಕ ದೇವಸ್ಥಾನ ಆಲಂಗಾರು ಇಲ್ಲಿನ ಮೊಕ್ತೇಸರಾದ ಪದ್ಮಿನಿ ರಾಮ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಅಳಿಕೆ ಸತ್ಯಸಾಯಿ ವಿದ್ಯಾದೇಗುಲದ ನಿವೃತ್ತ ಅಧ್ಯಾಪಕರಾದ ಪದ್ಮಯ್ಯ ಗೌಡ ವಿಟ್ಲ ಚಂದಾಡಿ ಇವರು ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ. ಕ್ಷೇ.ಧ.ಗ್ರಾ. ಯೋಜನೆ ಉಕ್ಕುಡ ಒಕ್ಕೂಟದ ಸೇವಾಪ್ರತಿನಿಧಿ ಸ್ವಾತಿ,ಅಧ್ಯಕ್ಷ ದಯಾನಂದ, ಕಾರ್ಯದರ್ಶಿ ಪುಪ್ಪಾ, ಪಾದೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅಕ್ಷತಾ ಭಾಗವಹಿಸಿದರು.


ಶ್ರೀ ಶಿಬರಿ ಭಜನಾ ಮಂಡಳಿ ಮಕ್ಕಳಿಂದ ಭಜನಾ ಕಾರ್ಯಕ್ರಮವು ನಡೆಯಿತು. ಪುಟ್ಟ ಮಕ್ಕಳು ಕೃಷ್ಣ-ರಾಧೆಯ ವೇಷ ಧರಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಸೇವಾಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಹೇಮಲತಾ, ನಿತ್ಯಾನಂದ, ಶ್ರೀ ಶಿಬರಿ ಭಜನಾ ಮಂಡಳಿಯ ಅಧ್ಯಾಪಕಿ ಪ್ರಿಯಾಂಕ ದೀಕ್ಷಿತ್ ಪೂಜಾರಿ ಹಾಗೂ ಹಲವು ವರ್ಷಗಳಿಂದ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡು ಬಂದಿರುವ ಪದಾಧಿಕಾರಿಗಳಾದ ಪುಪ್ಪಾ, ಕಾವೇರಿ, ಜಲಜಾಕ್ಷಿ, ಹಿರಿಯರಾದ ಮಾಯಿಲಪ್ಪ ಗೌಡ ಆಲಂಗಾರು ಇವರನ್ನು ಸನ್ಮಾನಿಸಲಾಯಿತು.

- Advertisement -

Related news

error: Content is protected !!