Thursday, April 25, 2024
spot_imgspot_img
spot_imgspot_img

ವಿಟ್ಲ: ಗ್ಯಾರೇಜ್‍ನಲ್ಲಿ ಬೆಂಕಿ ಅವಘಡದಿಂದ ಭಾರೀ ನಷ್ಟ ಅನುಭವಿಸಿದ ಮಾಲೀಕರಿಗೆ ಸಹಾಯಹಸ್ತ ಚಾಚಿದ ದ.ಕ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದ ಚಂದಳಿಕೆ ಎಂಬಲ್ಲಿರುವ ಹರೀಶ್ ಅವರ ಆಶೀರ್ವಾದ ಗ್ಯಾರೇಜ್ ನಲ್ಲಿ ಬೆಂಕಿ ಅವಘಡ ಸಂಭವಿಸಿ ಸಂಪೂರ್ಣವಾಗಿ ನಾಶಗೊಂಡು ಭಾರೀ ನಷ್ಟ ಅನುಭವಿಸಿದ ಮಾಲಕ ಹರೀಶ್ ಅವರಿಗೆ ದ.ಕ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘದ ಬಂಟ್ವಾಳ ವಲಯದ ವತಿಯಿಂದ ಧನ ಸಹಾಯ ವಿತರಿಸಲಾಯಿತು.

ಬಂಟ್ವಾಳ ವಲಯ ಅಧ್ಯಕ್ಷ ಅಣ್ಣು ಪೂಜಾರಿ ಅವರು ಮಾಲಕ ಹರೀಶ್ ಅವರಿಗೆ 65 ಸಾವಿರ ರೂ. ಚೆಕ್ ವಿತರಿಸಿದರು. ಹರೀಶ್ ಅವರಿಗೆ ಧೈರ್ಯ ತುಂಬಿದರು.

ಈ ಸಂದರ್ಭ ಗ್ಯಾರೇಜ್ ಮಾಲಕರ ಸಂಘದ ಬಂಟ್ವಾಳ ವಲಯದ ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್, ರಾಜೇಶ್ ಸಾಲ್ಯಾನ್, ಕೋಶಾಧಿಕಾರಿ ರಾಜೇಶ್ ಕುಲಾಲ್, ಸಂಘಟನಾ ಕಾರ್ಯದರ್ಶಿ ಸುಧೀರ್ ಬೈಪಾಸ್, ಜಗದೀಶ ರೈ, ಉಪಾಧ್ಯಕ್ಷರಾದ ಪ್ರಸಾದ್, ನವೀನ್, ಜತೆ ಕಾರ್ಯದರ್ಶಿ ರಮೇಶ್ ಬೈಪಾಸ್, ಜಿಲ್ಲಾ ಸಂಘದ ಅಧ್ಯಕ್ಷ ದಿನೇಶ್ ಕುಮಾರ್, ಕಾರ್ಯದರ್ಶಿ ಪುರುಷೋತ್ತಮ, ಜತೆ ಕಾರ್ಯದರ್ಶಿ ಮೋಹನ್ ಶೆಟ್ಟಿಗಾರ್, ಮಾಜಿ ಅಧ್ಯಕ್ಷ ಸುಂದರ ಆಚಾರ್ಯ ನೆಗಳಗುಳಿ, ವಿಟ್ಲ ವಲಯ ಅಧ್ಯಕ್ಷ ಬಿ.ಕೆ ಬಾಬು, ಕಾರ್ಯದರ್ಶಿ ರಾಜಶೇಖರ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!