ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಇದರ 2022-2023ನೇ ಸಾಲಿನ ವಾರ್ಷಿಕ ಮಹಾಸಭೆಯು ವಿಟ್ಲದ ಶಾಂತಿನಗರದಲ್ಲಿರುವ “ಅಕ್ಷಯ ಸಮುದಾಯ ಭವನ’ ದಲ್ಲಿ ಬ್ಯಾಂಕಿನ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೃಷ್ಣ ಭಟ್ ಕೆ. ಎಸ್ ಹಾಗೂ ವಿಶ್ವೇಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ಥಾಪಕಾಧ್ಯಕ್ಷರಾದ ದಿ.ವೆಂಕಪ್ಪಯ್ಯ, ಉರಿಮಜಲು ಅವರ ಭಾವಚಿತ್ರಕ್ಕೆ ಮಜಿ ರಾಮ್ ಭಟ್ ಪುಷ್ಪಾರ್ಚನೆ ಮಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಮೋಹನ್ ಕೆ.ಎಸ್, ನಿರ್ದೇಶಕರುಗಳಾದ ಎಂ ಹರೀಶ್ ನಾಯಕ್, ಮನೋರಂಜನ್ ಕೆ.ಆರ್, ವಿಶ್ವನಾಥ ಎಂ, ಕೃಷ್ಣ ಕೆ., ಉದಯಕುಮಾರ್ ಎ., ಬಾಲಕೃಷ್ಣ ಪಿ.ಎಸ್., ದಿವಾಕರ ವಿ., ದಯಾನಂದ ಆಳ್ವ ಕೆ., ಸುಂದರ ಡಿ., ಗೋವರ್ಧನ ಕುಮಾರ್ ಐ., ಶುಭಲಕ್ಷ್ಮೀ., ಜಯಂತಿ ಎಚ್.ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮರಳಿ ಶ್ಯಾಮ್ ಕೆ. , ಕಾನೂನು ಸಲಹೆಗಾರರಾದ ಪುಂಡಿಕಾೈ ನಾರಾಯಣ ಭಟ್ ಹಾಗೂ ಎಂ. ಗೋಪಾಲಕೃಷ್ಣ ಉಪಸ್ಥಿತರಿದ್ದರು.
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 2022-2023ನೇ ಸಾಲಿನಲ್ಲಿ 615.74 ಕೋಟಿ ರೂಪಾಯಿಗಳ ವ್ಯವಹಾರವನ್ನು ದಾಖಲಿಸಿ 2.61ಕೋಟಿ ರೂ. ಲಾಭವನ್ನು ಗಳಿಸಿದ್ದು, ಅಡಿಟ್ ವರ್ಗೀಕರಣದಲ್ಲಿ ಕಳೆದ ಹಲವು ವರ್ಷಗಳಿಂದ ಸತತವಾಗಿ “ಎ” ಗ್ರೇಡ್ನಲ್ಲಿ ಮುನ್ನಡೆಯುತ್ತಿದೆ.
ಮಹಾಸಭೆಯಲ್ಲಿ ನೋಟಿಸನ್ನು ಮಹೇಶ್ ಕುಮಾರ್ ಎಸ್ ಓದಿ ದಾಖಲು ಮಾಡಿದರು. ನಿರ್ದೇಶಕ ಮನೋರಂಜನ್ ಕೆ.ಆರ್ ಹಿಂದಿನ ಮಹಾಸಭೆಯ ನಡವಳಿಕೆಯನ್ನು ದಾಖಲು ಮಾಡಿದರು. 2022-23ನೇ ಸಾಲಿನ ಆಡಳಿತ ಮಂಡಳಿ ವರದಿ ಮಂಜೂರಾತಿ, ಲೆಕ್ಕ ಪರಿಶೋಧನಾ ವರದಿ ಮಂಜೂರು, ನಿವ್ವಳ ಲಾಭದ ವಿಂಗಡನೆ ಮಂಜೂರಾತಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮರಳಿ ಶ್ಯಾಮ್ ಕೆ. ವಾಚಿಸಿದರು. 2023-2024ನೇ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿಯ ಮಂಜೂರಾತಿ 2023-2024ನೇ ಸಾಲಿಗೆ ಬ್ಯಾಂಕಿನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರ ನೇಮಕ ಹಾಗೂ ಇತರ ವಿಷಯಗಳ ಮಂಡನೆ ಹಾಗೂ ಸಹಕಾರಿ ಸಂಘಗಳ ಇತ್ತೀಚಿನ ಕಾಯ್ದೆ ತಿದ್ದುಪಡಿಗಳ ಅನುಗುಣವಾಗಿ ಬ್ಯಾಂಕ್ನ ಸಮಗ್ರ ಉಪವಿಧಿ ತಿದ್ದುಪಡಿಗಳ ಬಗ್ಗೆ ಸಭೆಯ ಅನುಮೋದನೆಯನ್ನು ಪಡೆದುಕೊಳ್ಳಲಾಯಿತು.
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಇದರ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್ ಸ್ವಾಗತ ಭಾಷಣ ಮಾಡಿದರು. ಬಿ.ಸಿ ರೋಡ್ ಶಾಖೆಯ ಶಾಖಾಧಿಕಾರಿ ಶ್ರೀನಿಧಿ. ವಿ ಕುಡ್ವ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಮಹೇಶ್ ಕುಮಾರ್ ಎಸ್ ನಿರೂಪಿಸಿ, ಉಪಾಧ್ಯಕ್ಷ ಮೋಹನ್ ಕೆ.ಎಸ್ ಧನ್ಯವಾದವಿತ್ತರು.