- Advertisement -
- Advertisement -
ವಿಟ್ಲ: ವಾರಾಂತ್ಯದ ಕರ್ಫ್ಯೂಗೆ ರಾಜ್ಯದ ಎಲ್ಲೆಡೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳು ಜನರನ್ನು ನಿದ್ದೆಗೆಡಿಸಿದೆ. ಈ ಹಿನ್ನಲೆ ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಹೀಗಾಗಿ ವಿಟ್ಲದ ಜನತೆ ಸರ್ಕಾರದ ನಿಲುವಿಗೆ ಸಾಥ್ ನೀಡಿದ್ದಾರೆ.
ಇಂದು ವಿಟ್ಲ ಪೇಟೆ ಸ್ತಬ್ಧವಾಗಿದೆ. ಬಿಕೋ ಎನ್ನುತ್ತಿರುವ ರಸ್ತೆಗಳು, ಜನಸಂಚಾರವಿಲ್ಲ, ಎಲ್ಲಾ ಅಂಗಡಿ-ಮು0ಗಟ್ಟುಗಳು ಮುಚ್ಚಿವೆ. ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚರಿಸುತ್ತ ಇದೆ. ಪೊಲೀಸರು ವಾಹನಗಳನ್ನು ತಡೆದು ಅಗತ್ಯವಾಗಿ ತೆರಳುವವರಿಗೆ ಮಾತ್ರ ತೆರಳಲು ಅವಕಾಶ ನೀಡುತ್ತ ಇದ್ದಾರೆ.
- Advertisement -