- Advertisement -
- Advertisement -




ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಕೊಡಂಗಾಯಿ ಇದರ ಸಹಯೋಗದೊಂದಿಗೆ ಕೆ.ಎಮ್.ಎಫ್ ಮಂಗಳೂರು ಒಕ್ಕೂಟ ಇದರ ನುರಿತ ವೈದ್ಯರಾದ ಡಾ.ಚರಣ್ ಇವರಿಂದ ಹಸುವಿನಲ್ಲಿ ಬಂಜೆತನ ನಿವಾರಣೆ ಮತ್ತು ಹಸಿರು ಮೇವಿನ ಬಗ್ಗೆ ತರಬೇತಿ ಶಿಬಿರ ಕಾರ್ಯಕ್ರಮವು ವಿಟ್ಲ-ಪಡ್ನೂರು ಗ್ರಾಮ ಪಂಚಾಯತಿ ಸಭಾವನದಲ್ಲಿ ನಡೆಯಿತು.
ಮಾಹಿತಿ ನೀಡಿದ ಡಾ.ಚರಣ್ ಅವರನ್ನು ಲಯನ್ಸ್ ಕ್ಲಬ್ ವಿಟ್ಲ ವತಿಯಿಂದ ಗೌರಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಅಧ್ಯಕ್ಷರಜಿತ್ ಆಳ್ವ ಎರ್ಮೆನಿಲೆ, ಕಾರ್ಯದರ್ಶಿ ಶ್ರೀ ಅರವಿಂದ ರೈ ಮೂರ್ಜೆಬೆಟ್ಟು, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಧೀಶ್ ಭಂಡಾರಿ ಎರ್ಮೆನಿಲೆ, ಉಪಾಧ್ಯಕ್ಷ ಹೇಮನಂದ ಕರ್ಕಳ, ಮಂಗಳೂರು ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವಿಧ್ಯಾ ಸುನಿಲ್ ಉಪಸ್ಥಿತರಿದ್ದರು.
- Advertisement -