Friday, June 27, 2025
spot_imgspot_img
spot_imgspot_img

ನುಳಿಯಾಲು ತರವಾಡು ಧರ್ಮಚಾವಡಿಯಲ್ಲಿ ಶ್ರಾವಣ ಸಂಕ್ರಮಣದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ

- Advertisement -
- Advertisement -

ನುಳಿಯಾಲು ತರವಾಡು ಧರ್ಮಚಾವಡಿಯಲ್ಲಿ ಶ್ರಾವಣ ಸಂಕ್ರಮಣ ಆಚರಣೆ ಕುಟುಂಬಸ್ಥರ ಕೂಡುವಿಕೆಯೊಂದಿಗೆ ನಡೆಯಿತು. ಜಾಗದ ಗುಳಿಗ ದೈವಕ್ಕೆ ನೇಮ ನಡೆದು ಬಳಿಕ ಸಂಕ್ರಮಣದ ಪ್ರಯುಕ್ತ ಸೇವಾರೂಪವಾಗಿ ನಡೆಸುವ ಸಾಮೂಹಿಕ ಪ್ರಾರ್ಥನೆಯ ಅಂಗವಾಗಿ ನುಳಿಯಾಲು ಶ್ರೀಮತಿ ಯಮುನಾ ರಾಮಣ್ಣ ಶೆಟ್ಟಿ ಕವರಿನ ಪ್ರಾಯೋಜಕತ್ವದಲ್ಲಿ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ “ಶಸ್ತ್ರ ತ್ಯಾಗ – ಧುರ ವೀಳ್ಯ” ಯಕ್ಷಗಾನ ತಾಳಮದ್ದಳೆ ನಡೆಯಿತು.

ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಪ್ರಶಾಂತ ರೈ ಮುಂಡಾಲ ಗುತ್ತು, ಭರತ್ ರಾಜ್ ಶೆಟ್ಟಿ ಸಿದ್ಧಕಟ್ಟೆ, ಹಿಮ್ಮೇಳದಲ್ಲಿ ಚಂದ್ರಶೇಖರ ಗುರುವಾಯನಕೆರೆ, ಪವನ್ ರಾಜ್ ಕಲ್ಲೂರಾಯ ಹಾಗೂ ಅರ್ಥಧಾರಿಗಳಾಗಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ ಸಂಪಾಜೆ, ಅಶೋಕ್ ಶೆಟ್ಟಿ ಸರಪಾಡಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸದಾಶಿವ ಆಳ್ವ ತಲಪಾಡಿ, ರಾಧಾಕೃಷ್ಣ ರೈ ನುಳಿಯಾಲು, ಕು|ಅನನ್ಯಾ ರೈ ಮತ್ತು ಕು|ಸಮನ್ವಿ ರೈ ಇವೆರೆಲ್ಲರ ಕೂಡುವಿಕೆಯೊಂದಿಗೆ ಬಹಳ ವೈಭವದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಕುಟುಂಬದ ಮುಖ್ಯಸ್ಥರು, ಹಿರಿಯರು, ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!