- Advertisement -
- Advertisement -
ಉಡುಪಿ: ದೈವಗಳ ಕಾರ್ಣಿಕ ಮತ್ತೆ ಮತ್ತೆ ಜನರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುತ್ತಿದೆ. ಇಲ್ಲೊಂದು ಕಡೆ ದೈವಸ್ಥಾನದ ಪರಿಸರದಲ್ಲಿ ಉಂಟಾದ ನೀರಿನ ಸಮಸ್ಯೆಗೆ ದೈವವೇ ಪರಿಹಾರ ತೋರಿಸಿ ಕೊಟ್ಟು ಎಲ್ಲರನ್ನೂ ನಿಬ್ಬೆರಗಾಗಿಸಿದ ಘಟನೆ ನಡೆದಿದೆ.
ಉಡುಪಿಯ ಕಸ್ತೂರ್ಬಾ ನಗರದ ಚಿಟ್ಟಾಡಿಯಲ್ಲಿ ದೈವ ತೋರಿಸಿದ ಜಾಗದಲ್ಲಿ ಬೋರ್ವೆಲ್ ಕೊರೆದಾಗ ಆಗಸದ ಎತ್ತರಕ್ಕೆ ನೀರು ಚಿಮ್ಮಿದ ವೀಡಿಯೋವೊಂದು ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್ ಆಗಿದೆ.
ಚಿಟ್ಟಾಡಿಯ ಬಬ್ಬುಸ್ವಾಮಿ ದೈವಸ್ಥಾನದ ಪರಿಸರದಲ್ಲಿ ಉಂಟಾದ ನೀರಿನ ಸಮಸ್ಯೆಗಾಗಿ ಶ್ರೀ ದೈವರಾಜ ಬಬ್ಬು ಸ್ವಾಮಿ ಕಮಿಟಿ ದರ್ಶನ ಸೇವೆ ನೀಡಿ ಸಮಸ್ಯೆಗೆ ಪರಿಹಾರ ಕೇಳಿತ್ತು. ಈ ವೇಳೆ ಬಬ್ಬು ಸ್ವಾಮಿ ದೈವ ನೀರಿನ ಸೆಲೆ ಇರುವ ಜಾಗ ತೋರಿಸಿತ್ತು.
ಅದರಂತೆ ದೈವ ತೋರಿಸಿದ ಜಾಗದಲ್ಲಿ ಬೋರ್ವೆಲ್ ಕೊರೆದಾಗ ಆಗಸದ ಎತ್ತರಕ್ಕೆ ನೀರು ಚಿಮ್ಮಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಇದು ದೈವದ ಕಾರಣಿಕಕ್ಕೆ ಸಿಕ್ಕ ಉದಾಹರಣೆ ಎಂದು ಜನರು ಹೇಳುತ್ತಿದ್ದಾರೆ.
- Advertisement -