- Advertisement -
- Advertisement -
ಬಂಟ್ವಾಳ ಕ್ಷೇತ್ರದ ಸಾಲೆತ್ತೂರಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದ ಪ್ರಜಾಧ್ವನಿ ಯಾತ್ರೆಯು ಸಾಲೆತ್ತೂರು ಗ್ರಾಮದಿಂದ ಆರಂಭಗೊಂಡು ಕರೋಪಾಡಿ ಗ್ರಾಮದಲ್ಲಿ ಸಂಚರಿಸಿದ ಬಳಿಕ ಇಂದು ಸಂಜೆ ಕನ್ಯಾನದಲ್ಲಿ ಸಾರ್ವಜನಿಕ ಸಭೆಯ ಮೂಲಕ ಸಂಪನ್ನಗೊಳ್ಳಲಿದೆ.
ನಾಳೆ ಬೆಳಗ್ಗೆ ವಿಟ್ಲ ಪಡ್ನೂರು ಮೂಲಕ ಹಾದುಹೋಗಲಿರುವ ಪ್ರಜಾಧ್ವನಿ ಯಾತ್ರೆಯು ಕೊಳ್ನಾಡು ಗ್ರಾಮದ ಸಾಲೆತ್ತೂರು ಮೈದಾನದಲ್ಲಿ ಸಭೆ ಸೇರಲಿದ್ದು ಬಳಿಕ ಮಂಚಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯ ಮೂಲಕ ಸಂಪನ್ನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕುಳಾಲು ಸುಭಾಶ್ತಂದ್ರ ಶೆಟ್ಟಿ, ಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮಹಮ್ಮದ್, ಚಿತ್ತರಂಜನ್ ಶೆಟ್ಟಿ, ಮಲ್ಲಿಕಾ ಪಕ್ಕಳ ಮತ್ತಿತರರು ಪ್ರಜಾಧ್ವನಿ ಯಾತ್ರೆಯ ನೇತೃತ್ವ ವಹಿಸಿದ್ದರು.
- Advertisement -