- Advertisement -
- Advertisement -

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ನೂತನ ಸೇತುವೆ ನಿರ್ಮಾಣದ ಕಾಮಗಾರಿಯಲ್ಲಿ ನಿರತವಾಗಿರುವ ಲಾರಿಯೊಂದು ನದಿಯ ಮಧ್ಯದಲ್ಲಿ ಬಾಕಿಯಾದ ಘಟನೆ ಮಂಗಳವಾರ ಸಂಭವಿಸಿದೆ. ಬಳಿಕ ಜೆಸಿಬಿ ಸಹಾಯದಿಂದ ಲಾರಿಯನ್ನು ಬದಿಗೆ ಸರಿಸಲಾಯಿತು.
ಮಳೆಗಾಲಕ್ಕೆ ಮುನ್ನವೇ ಸೇತುವೆಯ ಬಹುತೇಕ ಪಿಲ್ಲರ್ಗಳು ನಿರ್ಮಾಣಗೊಂಡಿದ್ದು, ಮಳೆಯ ವೇಳೆ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಕಾಮಗಾರಿ ಮತ್ತೆ ಆರಂಭ ಗೊಂಡಿದ್ದು, ನದಿಗೆ ಮಣ್ಣು ತುಂಬಿಸಿ ಲಾರಿಗಳ ಸಾಗಾಟಕ್ಕಾಗಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ.

ಮಣ್ಣು ತುಂಬಿಸುವ ಕಾರ್ಯದಲ್ಲಿದ್ದಾಗ ನೇತ್ರಾವತಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದೆ, ಮಣ್ಣು ಖಾಲಿ ಮಾಡಲು ಒಂದು ಭಾಗದಿಂದ ನದಿ ಮಧ್ಯ ಭಾಗಕ್ಕೆ ತೆರಳಿದ ಲಾರಿ ಮಣ್ಣು ಖಾಲಿ ಮಾಡಿ ವಾಪಸು ತೆರಳಬೇಕೆನ್ನುವಷ್ಟರಲ್ಲಿ ನದಿಯ ಮಧ್ಯಭಾಗದ ಮಣ್ಣು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಇದರಿಂದ ಲಾರಿ ಇನ್ನೊಂದು ಕಡೆಗೆ ದಾಟಲು ಸಾಧ್ಯವಾಗದೆ ಮಧ್ಯೆ ಸಿಲುಕಿಕೊಂಡಿತು. ಆ ಬಳಿಕ ಜೆಸಿಬಿ ಬಳಸಿ ಟಿಪ್ಪರ್ ನ್ನು ಎಳೆದು ರಸ್ತೆಗೆ ಕೊಂಡೊಯ್ಯಲಾಯಿತು.

- Advertisement -