- Advertisement -
- Advertisement -
ಬಂಟ್ವಾಳ ತಾಲೂಕಿನ ಸರಪಾಡಿ ಹಾಗೂ ನಾವೂರ ಗ್ರಾಮಕ್ಕೆ ಹೊಂದಿಕೊಂಡಿರುವ ಅಲ್ಲಿಪಾದೆ ಎಂಬಲ್ಲಿ ಸಂತ ಜೋನ್ ಚರ್ಚ್ನ ಮುಂಭಾಗದಲ್ಲಿ ಸರಕಾರಿ ಜಾಗ ಇದೆ. ಈ ಸರಕಾರಿ ಜಾಗದಲ್ಲಿ ರಾತೋರಾತ್ರಿ ಏಸುವಿನ ಪ್ರತಿಮೆ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದು ಕಾನೂನು ಬಾಹಿರವಾಗಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಪ್ರತಿಮೆಯ ಸುತ್ತಲೂ ಅನಧಿಕೃತ ಆವರಣವನ್ನು ನಿರ್ಮಿಸಲಾಗಿದ್ದು ಇದರಿಂದ ಈ ಪ್ರದೇಶದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗಿರುತ್ತದೆ. ಅನಧಿಕೃತ ಏಸುವಿನ ಪ್ರತಿಮೆಯನ್ನು ತೆರವುಗೊಳಿಸದಿದ್ದರೆ ಅಲ್ಲಿ ಉಂಟಾಗುವ ಕೋಮು ಸಂಘರ್ಷಕ್ಕೆ ಚರ್ಚ್ ಹೊಣೆಯಾಗುತ್ತದೆ ಎಂದು ಹಿಂಜಾವೇ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಬಂಟ್ವಾಳ ತಹಶೀಲ್ದಾರರಿಗೆ ಹಿಂದೂ ಜಾಗರಣ ವೇದಿಕೆ ಸರಪಾಡಿ ವಲಯ ಬಂಟ್ವಾಳ ತಾಲೂಕು ದೂರು ನೀಡಿದ್ದಾರೆ.
- Advertisement -