- Advertisement -
- Advertisement -


ಬಿ.ಸಿ ರೋಡ್ ಮೂಲದ ಯುವಕನೋರ್ವ ಭೀಕರ ಲಾರಿ ಅಪಘಾತದಲ್ಲಿ ಮೃತಪಟ್ಟ ಘಟನೆ ತಮಿಳುನಾಡಿನ ಅಂಬೂರು ಎಂಬಲ್ಲಿ ನಡೆದಿದೆ.
ಮೃತರನ್ನು ಇರ್ಷಾದ್ ತಲಪಾಡಿ ಎಂದು ಗುರುತಿಸಲಾಗಿದ್ದು, ಮಂಗಳೂರು ಬಂದರ್ ನಿಂದ ಮೀನು ಹೊತ್ತು ಚೆನ್ನೈ ನ ಮಾರುಕಟ್ಟೆಗೆ ಹೊರಟಿದ್ದ ಲಾರಿಯಲ್ಲಿ ಚಾಲಕರಾಗಿದ್ದರು.

ತಮಿಳುನಾಡಿನ ಅಂಬೂರು ಎಂಬಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಬಂದ ವಾಹನ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಲಾರಿಯಲ್ಲಿದ್ದ ಇನ್ನೋರ್ವ ಚಾಲಕ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.

- Advertisement -