- Advertisement -
- Advertisement -



ಮಣಿಪಾಲ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊರ್ವಳನ್ನು ಅತ್ಯಾಚಾರವೆಸಗಿದ ಘಟನೆ ಉಡುಪಿ ಮಹಿಳಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ತಮಿಳುನಾಡು ವೆಲ್ಲೂರು ನಿವಾಸಿ ಪ್ರಶಾಂತ್ ಮುದಲಿಯಾರ್ ಎನ್ನಲಾಗಿದೆ.
ಕಾಲೇಜ್ ದಿನಗಳಲ್ಲಿ ಯುವತಿಯ ಪರಿಚಯವಾಗಿ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಕಳೆದ ಜೂನ್ ನಲ್ಲಿ ಯುವಕ ತಾನು ಕೆಲಸ ಮಾಡುತ್ತಿದ್ದ ಮಣಿಪಾಲಕ್ಕೆ ಯುವತಿಯನ್ನು ಕರೆಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಯುವತಿ ಮದುವೆ ಆಗುವಂತೆ ಕೇಳಿಕೊಂಡರೂ, ಜಾತಕ ಸರಿ ಇಲ್ಲ ಎಂದು ಮದುವೆಗೆ ನಿರಾಕರಿಸಿ ವಂಚಿಸಿದ್ದಾಗಿ ಯುವತಿ ಉಡುಪಿ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ.


- Advertisement -








