Sunday, June 29, 2025
spot_imgspot_img
spot_imgspot_img

ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದಲ್ಲಿ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆ

- Advertisement -
- Advertisement -

ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದಲ್ಲಿ ಮಾ.5ರಿಂದ ಮಾ.10ರವರೆಗೆ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆ ಭಾನುವಾರ ನಡೆಯಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ದೇಗುಲ ನಿರ್ಮಾಣವೆಂದರೆ ಧರ್ಮ, ಸಂಸ್ಕ್ರತಿಯ ಅನಾವರಣವಾಗಿದೆ. ಬ್ರಹ್ಮಕಲಶೋತ್ಸವ ಧರ್ಮ ಸಂರಕ್ಷಣೆಯ ಕಾರ್ಯವೂ ಆಗಿದೆ. ಸುವಸ್ತುಗಳನ್ನು ಸಮರ್ಪಿಸಿ ಸೇವೆ ಸಲ್ಲಿಸುವ ಅವಕಾಶ ಇದಾಗಿದೆ. ಭವ್ಯತೆಯ ಸೃಷ್ಟಿಗೆ ದಿವ್ಯ ದೃಷ್ಟಿ ಬೇಕು. ತಾಯಿಯ ಸೇವೆಗೆ ಯಾರೂ ಸೇರಿಕೊಳ್ಳಬಹುದು. ಅನ್ನದಾನ ವ್ಯವಸ್ಥಿತವಾಗಿರಬೇಕು. ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಅತಿಥಿಗಳ ಉಪಚಾರ ಉತ್ತಮವಾಗಿರಬೇಕು. ಅರ್ಥಿಕ ಕ್ರೋಡೀಕರಣ, ಮಹಿಳೆಯರು ಯುವಕರ ತಂಡಗಳ ತಯಾರಾಗಬೇಕು. ಶಿಸ್ತು ಸಂಯಮ ಇದ್ದ ಸಂಘಟನೆ ಯಶಸ್ವಿಯಾಗುತ್ತದೆ ಎಂದರು.

ಶ್ರೀ ಕ್ಷೇತ್ರ ಕುಕ್ಕಾಜೆಯ ಶ್ರೀಕೃಷ್ಣ ಗುರೂಜಿ ಮಾತನಾಡಿ ಸಾನ್ನಿಧ್ಯದ ಕಾಳಿಕಾಂಬೆ, ಆಂಜನೇಯರ ಇಚ್ಛೆಯಂತೆ, ನಿಮ್ಮೆಲ್ಲರ ಪ್ರೀತಿ,ಭಕ್ತಿ, ಸಹಕಾರದಿಂದ ದೇಗುಲ ಜೀರ್ಣೋದ್ಧಾರಗೊಂಡಿದೆ. ಪ್ರಾಂಜಲ ಮನಸ್ಸಿನ ಭಕ್ತರ ಸರ್ವರೀತಿಯ ಸೇವೆಯಿಂದ ಬ್ರಹ್ಮಕಲಶೋತ್ಸವ ಸಾಂಗವಾಗಿ ನೆರವೇರಲಿದೆ ಎಂದರು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಕೆ.ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು.

ಯತೀಶ್ ಆಳ್ವ ಏಳ್ನಾಡುಗುತ್ತು, ವಿಟ್ಲ ಬಿಲ್ಲವ ಸಂಘದ ಬೆಳ್ಳಿಹಬ್ಬ ಸಂಭ್ರಮ ಸಮಿತಿ ಅಧ್ಯಕ್ಷ ಡಾ.ಗೀತಾಪ್ರಕಾಶ್, ನಿವೃತ್ತ ಮುಖ್ಯೋಪಾಧ್ಯಾಯ ಲಕ್ಷ್ಮಣ ನಾಯ್ಕ ಕಣ್ಣಕಜೆ, ಅಶೋಕ ಶೆಟ್ಟಿ ಬಿರ್ಕಾಪು, ಸದಾಶಿವ ಶೆಟ್ಟಿ ಬೀಡಿನಬೈಲು, ಶೀನ ನಾಯ್ಕ ಅಡ್ಯನಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಾರಜೆ, ಐತ್ತಪ್ಪ ಪೂಜಾರಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸೇವಾ ಪ್ರತಿನಿಧಿ ಗುಲಾಬಿ ಎನ್.ಆಶೋಕ್ ಶೆಟ್ಟಿ ಬಿರ್ಕಪು, ಹರೀಶ್ ಮಣಿಯಾಣಿ ತಚ್ಚಮೆ, ವಿಠಲ ಶೆಟ್ಟಿ ಸುಣ್ಣಂಬಳ,ಶ್ರೀಧರ ಬಾಳೆಕಲ್ಲು ಸ್ವಾಗತಿಸಿದರು. ದಿನೇಶ್ ರಾಯಿ ಉಪಸ್ಥಿತರಿದ್ದರು.
ಬ್ರಹ್ಮಕಲಶ ಸಮಿತಿ ಅಧ್ಯಕ್ಷರಾಗಿ ಡಾ.ಗೀತಪ್ರಕಾಶ್ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಒಡಿಯೂರು ಶ್ರೀ, ಮಾಣಿಲಶ್ರೀ, ಕಣಿಯೂರುಶ್ರೀ ಅವರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

vtv vitla
- Advertisement -

Related news

error: Content is protected !!