
ಪ್ರವೀಣ್ ನೆಟ್ಟರ್ ಸಾವಿನ ಘಟನೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಾಜ್ಯಕ್ಕೆ ಮಾದರಿ ಜನಪ್ರತಿನಿಧಿಯಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಪಳಗಿದ ರಾಷ್ಟ್ರ ಭಕ್ತ ಪ್ರವೀಣ್ ನೆಟ್ಟರ್ ಹತ್ಯೆ ಹಿನ್ನಲೆ ಸಾಮಾನ್ಯ ಕಾರ್ಯಕರ್ತನಂತೆ ಪಾದಯಾತ್ರೆ ಮೂಲಕ ಪ್ರವೀಣ್ ನೆಟ್ಟರ್ ಮನೆ ತಲುಪಿ ದುಃಖ ಸಾಗರದಲಿ ಮುಳುಗಿದ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿ ಸಂತೈಸುವ ದೃಶ್ಯವನ್ನ ಜನರು ಪ್ರತ್ಯಕ್ಷವಾಗಿ ಕಂಡಿದ್ದಾರೆ.

“ದೇವದುರ್ಲಭ ಕಾರ್ಯಕರ್ತರ ಶ್ರಮದಿಂದ ಮಾತ್ರ ಒಬ್ಬ ಜನಪ್ರತಿನಿಧಿಯಾಗ ಬಲ್ಲ” ಎಂದು ಹಲವಾರು ಬಾರಿ ಕಾರ್ಯಕರ್ತರ ಸಭೆಗಳಲ್ಲಿ ನುಡಿದ ನುಡಿಗಳನ ನಡೆದು ತೋರಿಸುವ ಮೂಲಕ ನಿಷ್ಠೆ, ಕಾರ್ಯಕರ್ತರ ಪ್ರೀತಿಗೆ ಬದ್ಧರಾದ ಹರೀಶ್ ಪೂಂಜ. ತನ್ನ ವಿಧಾನ ಸಭಾ ಕಾರ್ಯವ್ಯಾಪ್ತಿ ಅಲ್ಲದಿದ್ದರೂ ಪ್ರಾರಂಭದಿಂದ ಅಂತಿಮ ವರೆಗೂ ಸಾಮಾನ್ಯ ಕಾರ್ಯಕರ್ತನಂತೆ ಆಗಮಿಸಿ ದುಃಖ ಸಾಗರದಲಿ ಮುಳುಗಿದ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿ ಸಂತೈಸುವ ದೃಶ್ಯವನ್ನ ಜನರು ಪ್ರತ್ಯಕ್ಷವಾಗಿ ಕಂಡಿದ್ದಾರೆ.

ಹರೀಶ್ ಪೂಂಜ ಹೊರತುಪಡಿಸಿ ಯಾವ ಜನಪ್ರತಿನಿಧಿಗಳಿಗೂ ಅವಕಾಶ ಕಲ್ಪಿಸದ ಹಿಂದೂ ಸಂಘಟನೆಗಳ ಕಾರ್ಯಕರ್ತರು. ಸುಳ್ಯದ ಕಾರ್ಯಕರ್ತರು “ನಮಗೆ ಯಾರಮೇಲು ಭರವಸೆ ಇಲ್ಲ. ಪ್ರವೀಣ್ ಸಾವಿಗೆ ನ್ಯಾಯ ಒದಗಿಸುವ ಸಾಮರ್ಥ್ಯ ನಿಮಗೆ ಮಾತ್ರ ಸಾಧ್ಯ. ಆ ಜವಾಬ್ದಾರಿ ನೀವೇ ತೆಗೆದುಕೊಳ್ಳಬೇಕು” ಎಂದು ಹರೀಶ್ ಪೂಂಜ ಅವರಲ್ಲಿ ಮನವಿ ಮಾಡಿಕೊಂಡರು.

ಮನೆಯರಿಗೆ ಧೈರ್ಯ ತುಂಬಿ ಸಾಂತ್ವನ ಗೈದು ಧನ ಸಹಾಯದ ಘೋಷಣೆ ಮಾಡಿದ ಹರೀಶ್ ಪೂಂಜ.
ಪ್ರವೀಣ್ ತಾಯಿಯ ಕೈ ಹಿಡಿದು “ನಿಮ್ಮ ಮಗು ನಿಮ್ಮಿಂದ ದೂರ ವಾಗಿರಬಹುದು. ನನ್ನನ್ನ ನಿಮ್ಮ ಮಗನೆಂದೆ ಭಾವಿಸಿ ನಮ್ಮಿಬ್ಬರ ಸಿದ್ದಾಂತ ಒಂದೇ, ನಿಮ್ಮ ಮುಂದಿನ ಜೀವನದ ಆಶೋತ್ತರಗಳಿಗಳ ಸೇವೆಮಾಡಲು ನನಗೂ ಅವಕಾಶ ಕಲ್ಪಿಸಿ” ಗದ್ಗದಿತರಾಗಿ ನುಡಿದು ತನ್ನ ವೈಯಕ್ತಿಕ ದುಡಿಮೆಯ ಐದು ಲಕ್ಷ ರೂಪಾಯಿ ತನ್ನ ಕಡೆಯಿಂದ ಮತ್ತು ಪ್ರವೀಣ್ ಧರ್ಮ ಪತ್ನಿ ನೂತನ ಅವರ ಖಾಸಗಿ ವಿದ್ಯಾಸಂಸ್ಥೆಯ ಉದ್ಯೋಗವನ್ನ ಸರಕಾರಿ ವೇತನದಲ್ಲಿ ಖಾಯಂ ಮಾಡುವ ಭರವಸೆ ತುಂಬಿದರು.

