- Advertisement -
- Advertisement -
ಸೋಮವಾರಪೇಟೆ: ರಿವಾಲ್ವಾರ್ನಿಂದ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮದಲ್ಲಿ ನಡೆದಿದೆ.
ನಾಪಂಡ ಕುಶಾಲಪ್ಪ ಅವರ ಪುತ್ರ ರಾಜೇಶ್ ಚಂಗಪ್ಪ (28) ಮೃತ ಯುವಕ.
ಮಾದಾಪುರ ಸಮೀಪದ ಮುವತೊಕ್ಕಲು ಗ್ರಾಮದ ರಸ್ತೆಯಲ್ಲಿ ಶನಿವಾರ ಮಧ್ಯರಾತ್ರಿ ಬಲೆನೊ ಕಾರು ಅಪಘಾತವಾಗಿದ್ದು, ಅಪಘಾತವಾಗಿರುವ ವಿಷಯವನ್ನು ಮನೆಗೆ ಕರೆಮಾಡಿ ತಿಳಿಸಿದ್ದಾನೆಂದು ಹೇಳಲಾಗಿದೆ. ಸ್ವಲ್ಪ ದೂರದಲ್ಲಿ ಡಾಲಿ ಪೂವಯ್ಯ ಎಂಬುವವರಿಗೆ ಸೇರಿದ ಕಾಫಿ ತೋಟದೊಳಗೆ ತೆರಳಿ ಕಳೆದ ಮೂರು ತಿಂಗಳ ಹಿಂದೆ ಖರೀದಿಸಿದ್ದ ರಿವಾಲ್ವರ್ ನಿಂದ ಹಣೆ ಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದಾನೆ ಎನ್ನಲಾಗಿದ್ದು , ಕಾಫಿ ತೋಟ ಸಮೀಪ ಮೃತದೇಹ ಪತ್ತೆಯಾಗಿದೆ.
ಭಾನುವಾರ ಬೆಳಿಗ್ಗೆ ಮನೆ ಸದಸ್ಯರು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು . ಪೊಲೀಸರು ತನಿಖೆ ಕೈಗೊಂಡಿದ್ದರೆ.
- Advertisement -