- Advertisement -
- Advertisement -

ವಿಟ್ಲ: ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ, ಮರಕ್ಕೆ ಗುದ್ದಿದ ಘಟನೆ ವಿಟ್ಲದ ಜಟಧಾರಿ ದೈವಸ್ಥಾನದ ಎದುರು ತಿರುವಿನಲ್ಲಿ ಇಂದು ಮದ್ಯಾಹ್ನ ನಡೆದಿದೆ.

ವಿಟ್ಲ ಬಸ್ಟ್ಯಾಂಡ್ ಬಳಿಯಿಂದ ಬರುವಾಗ, ದ್ವಿಚಕ್ರ ವಾಹನ ಮತ್ತು ಒಂದು ಕಾರಿಗೆ ಡಿಕ್ಕಿ ಹೊಡೆದು ಬಳಿಕ ಅಪಾಯಕಾರಿ ತಿರುವಿನಲ್ಲಿ ಮರಕ್ಕೆ ಹೊಡೆದಿದೆ.

ಕಾರಿನಲ್ಲಿದ್ದ ಮೂವರಲ್ಲಿ ಕೇರಳ ಮೂಲದ ಇಬ್ಬರು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕೆತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


- Advertisement -