


ಕನ್ಯಾನ: ವಿಟ್ಲ ಕಳಂಜಿಮಲೆ ಪೂರ್ವ ವಿಟ್ಲ ಉಪ ವಲಯಕ್ಕೆ ಒಳಪಡುವ ಉಕ್ಕುಡ ಕನ್ಯಾನ ರಸ್ತೆಯ ಪಕ್ಕದಲ್ಲಿ ಮರ ಬೀಳುವ ಹಂತದಲ್ಲಿದ್ದು ಕನ್ಯಾನ ಜನರಲ್ಲಿ ಬಹಳ ದಿನಗಳಿಂದ ಆತಂಕ ಮೂಡಿತ್ತು. ಈ ಮರದ ಹತ್ತಿರ ವಿದ್ಯುತ್ ಕಂಬಗಳು ಇದ್ದ ಕಾರಣ ಈ ಮರಗಳು ಬಿದ್ದು ರಸ್ತೆ ವಿದ್ಯುತ್ ಕಂಬಗಳು ಬಿದ್ದರೆ ಅಪಾರ ಪ್ರಮಾಣದ ನಷ್ಟವನ್ನು ಮನಗಂಡು ಇದಕ್ಕೆ ಪೂರಕವಾಗಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ನಡೆಸಿದ ವಿಟ್ಲ ಉಪ ಅರಣ್ಯಾಧಿಕಾರಿ ಮೆಹಾಬೂಬಾ ಸಾಬ್ ಮತ್ತು ಕನ್ಯಾನ ವಿದ್ಯುತ್ ಶಾಖಾಧಿಕಾರಿ ಸತೀಶ್ ಇವರಿಗೆ ತಿಳಿಸಿದಾಗ ಅದಕ್ಕೆ ಪರಿಹಾರ ನೀಡುವ ಮೂಲಕ ದಿನಾಂಕ 6/7/22 ರಿಂದ 9/7/22ರವರೆಗೆ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಕನ್ಯಾನ ವಿದ್ಯುತ್ ಶಾಖಾಧಿಕಾರಿ ಸತೀಶ್, ಲೈನ್ ಮ್ಯಾನ್ ಶಿವಪ್ರಸಾದ್ ಮತ್ತು ಬಳಗದವರು ಇದ್ದು ಕಾರಣ ಯಾವುದೇ ಅಪಾಯವಿಲ್ಲದೆ ಮರಗಳನ್ನು ತೆರವುಗೊಳಿಸಿದ್ದಾರೆ. ಪಿ .ಬಿ ರಘು ಅರಣ್ಯ ರಕ್ಷಕ ಕನ್ಯಾನ, ಕೆ ಸೀತಾರಾಮ ಉಪ ಅರಣ್ಯಾಧಿಕಾರಿ ವಿಟ್, ಎಂ ನವೀನ್ ಅರಣ್ಯ ರಕ್ಷಕ ವಿಟ್ಲ, ಪದ್ಮನಾಭ ಕಲ್ಲಂಗಳ ಅರಣ್ಯ ವಿಕ್ಷಕ ಕನ್ಯಾನ, ಕೆ ಪಿ ಗಂಗಾಧರ ಕನ್ಯಾನ, ಕಾಸಿಂ ಕನ್ಯಾನ, ಖಾದರ್ ಕನ್ಯಾನ, ರಾಜೇಶ್ ಡಿ ಸೋಜ ಕನ್ಯಾನ ಮುಂತಾದವರು ಹಾಜರಿದ್ದರು.

