Monday, June 30, 2025
spot_imgspot_img
spot_imgspot_img

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರ ತಲುಪಿದ ರಾಧಸುರಭೀ ಗೋಶಾಲೆಯ ‘ಗೋರಥ ಯಾತ್ರೆ’

- Advertisement -
- Advertisement -

ವಿಟ್ಲ: ‘ರಾಧಾ ಸುರಭಿ ಗೋ ಮಂದಿರದ ಗೋ ನವರಾತ್ರಿ ಉತ್ಸವ’ದ ಪ್ರಯುಕ್ತ ಭಾನುವಾರ ಪುದು ಗ್ರಾಮದ ಗೋವಿನ ತೋಟ ರಾಧಸುರಭೀ ಗೋಶಾಲಾ ವಠಾರದಿಂದ ಆರಂಭಗೊಂಡ ‘ಗೋರಥ ಯಾತ್ರೆ’ಗೆ ಇಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇಂದು ಬೆಳಿಗ್ಗೆ 10ಕ್ಕೆ ಗೋ ಯಾತ್ರೆಯ ರಥದ ಎದುರು ಗೋ ಪೂಜೆ ನಡೆಯಿತು.

ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಮತ್ತು ಗೋ ಸೇವಾ ಗತಿವಿಧಿ, ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಭಕ್ತಿ ಭೂಷಣ್‌ದಾಸ್ ಪ್ರಭುಜೀಯವರ ನೇತೃತ್ವದಲ್ಲಿ ಗೋ ನವರಾತ್ರಿ ಉತ್ಸವವು ವೈವಿಧ್ಯಮಯವಾಗಿ 26-10-2022 ರಿಂದ 3-10-2022ರ ತನಕ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಬ್ರಹ್ಮಗಿರಿ ಗೋವಿನತೋಟದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರಗಲಿದೆ.

ಇದರ ಪ್ರಯುಕ್ತ ರಾಧಸುರಭೀ ಗೋಶಾಲಾ ವಠಾರದಿಂದ ಆರಂಭಗೊಂಡ ‘ಗೋರಥ ಯಾತ್ರೆ’ಗೆ ಇಂದು ವಿಟ್ಲ ತಲುಪಿದ್ದು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಗೋ ಯಾತ್ರೆಯ ರಥದ ಎದುರು ಗೋ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಊರಿನ ಗಣ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದರು.

- Advertisement -

Related news

error: Content is protected !!