- Advertisement -
- Advertisement -
ಮಡಿಕೇರಿ: ಕಾಡಾನೆಯೊಂದು ಕೆಎಸ್ಆರ್ಟಿಸಿ ಬಸ್ ಅನ್ನು ಅಡ್ಡಗಟ್ಟಿ ಅಟ್ಟಿಸಿಕೊಂಡು ಬಂದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ದೆವರಪುರದಲ್ಲಿ ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಬೆಳಗ್ಗೆ ಘಟನೆ ನಡೆದಿದೆ. ಪ್ರಯಾಣಿಕರೋರ್ವರ ಮೊಬೈಲ್ನಲ್ಲಿ ಕಾಡಾನೆ ಕೆಎಸ್ಆರ್ಟಿಸಿ ಬಸ್ ಅನ್ನು ಅಟ್ಟಿಸಿಕೊಂಡು ಬಂದ ದೃಶ್ಯ ಸೆರೆಯಾಗಿದೆ.
ದೃಶ್ಯದಲ್ಲಿ ಕಂಡಂತೆ ಕಾಡಾನೆ ರಸ್ತೆ ದಾಟುತ್ತಿದ್ದರಿಂದ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ ನಿಲ್ಲಿಸಿದ್ದಾನೆ. ಆದರೆ ಈ ವೇಳೆ ಆನೆ ಬಸ್ ಬಳಿಗೆ ಓಡೋಡಿ ಬಂದಿದೆ. ಇದರಿಂದ ಗಾಬರಿಗೆ ಒಳಗಾದ ಚಾಲಕ ಮತ್ತು ಪ್ರಯಾಣಿಕರು ಒಂದು ಬಾರಿ ಸ್ತಬ್ಧರಾಗಿದ್ದಾರೆ.
- Advertisement -