Sunday, June 29, 2025
spot_imgspot_img
spot_imgspot_img

ಸವಣೂರು: ದುಷ್ಕರ್ಮಿಗಳಿಂದ ವಿ.ಎ ಆಫೀಸ್‌ ಮತ್ತು ಬೇಕರಿಗೆ ಕಲ್ಲು ತೂರಾಟ

- Advertisement -
- Advertisement -

ಸವಣೂರು: ಕಂದಾಯ ಇಲಾಖೆ ಮತ್ತು ಬೇಕರಿಗೆ ಕಲ್ಲು ತೂರಾಟ ನಡೆಸಿದ ಘಟನೆ ಸವಣೂರು ಜಂಕ್ಷನ್ ನಲ್ಲಿ ನಡೆದಿದೆ.

ಸವಣೂರಿನಲ್ಲಿ ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ, ಕಲ್ಲು ಎತ್ತಿಹಾಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪ್ರಸಾದ್ ಎಂಬಾತ ಕೊಲೆಗೆ ಯತ್ನಿಸಿದವರು ಎನ್ನಲಾಗಿದೆ.

ಅಲ್ಲದೆ ಸವಣೂರು ಗ್ರಾ.ಪಂ.ಕಟ್ಟಡದಲ್ಲಿರುವ ಗುಣಪಾಲ ಗೌಡ ಇಡ್ಯಾಡಿ ಅವರಿಗೆ ಸೇರಿದ ಬೇಕರಿಯನ್ನು ತಲವಾರಿನಿಂದ ಪುಡಿಗೈದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಸ್ಥಳಕ್ಕೆ ಬೆಳ್ಳಾರೆ ಠಾಣೆಯ ಎಸೈ ಸುಹಾಸ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!