ಸುಬ್ರಹ್ಮಣ್ಯ: ಗ್ರಾ.ಪಂ ಸದಸ್ಯೆ ಐನೆಕಿದು ಗ್ರಾಮದ ಭಾರತಿ ಮೂಕಮಲೆ ಕಾಣೆಯಾಗಿ 20 ದಿನಗಳಾದರೂ ಪತ್ತೆಯಾಗಿಲ್ಲ.
ಈ ಬಗ್ಗೆ ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಲಲಿತಾ ಗುಂಡಡ್ಕ ಹಾಗೂ ಸದಸ್ಯರು ಸೇರಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಶೀಘ್ರ ಪತ್ತೆಗೆ ಮನವಿ ಮಾಡಿದ್ದಾರೆ. ಬಳಿಕ ಮಾದ್ಯಮ ಜೊತೆ ಮಾತನಾಡಿದ ಗ್ರಾ.ಪಂ ಸದಸ್ಯ ರಾಜೇಶ್ ಅವರು ಪೊಲೀಸರು ಈ ಘಟನೆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.ಕೆಲವೇ ದಿನದಲ್ಲಿ ಪತ್ತೆ ಹಚ್ಚುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿರುವ ದೂರದ ಸಂಬಂಧಿ ಜೊತೆ ಹೋಗಿರುವುದಾಗಿ ಹೇಳಲಾಗುತ್ತಿದ್ದು ಅ. 29 ರಂದು ಸಂಜೆ ಆಕೆಯ ಮನೆ ಬಳಿಗೆ ಕಾರಿನಲ್ಲಿ ಒಬ್ಬರು ಬಂದಿದೆ ಎಂಬ ಸುದ್ದಿಯೂ ಹರಡಿತ್ತು. ಕಾರು ಬಂದು ತೆರಳಿವುದು ಸಿ.ಸಿ ಕ್ಯಾಮರಾದಲ್ಲಿ ದಾಖಲಾಗಿದೆ ಎನ್ನಲಾಗಿದೆ .
ಕಾರಿನಲ್ಲಿ ತೆರಳಿದವರು ಬೆಂಗಳೂರಿಗೆ ತಲುಪಿರುವುದು ಪೊಲೀಸರ ಪರಿಶೀಲನೆ ವೇಳೆ ಗೊತ್ತಾಗಿದೆ.ಅಲ್ಲದೆ ಆಂದ್ರ ಪ್ರದೇಶಕ್ಕೂ ಹೋಗಿರುವ ಮಾಹಿತಿ ಲಭ್ಯವಾಗಿತ್ತು. ಸುಬ್ರಹ್ಮಣ್ಯ ಠಾಣೆಯ ಎಸ್ ಐ ಖುದ್ದು ಬೆಂಗಳೂರಿಗೆ ತೆರಳಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದರು. ಈ ನಡುವೆ ಕಾಣೆಯಾದ ಗ್ರಾ.ಪಂ ಸದಸ್ಯೆಯನ್ನು ಪತ್ತೆ ಹಚ್ಚುವಂತೆ ಗ್ರಾ.ಪಂ ವತಿಯಿಂದ ಸುಬ್ರಹ್ಮಣ್ಯ ಠಾಣೆಗೆ ಮನವಿ ಸಲ್ಲಿಸಲಾಗಿತ್ತು.