- Advertisement -
- Advertisement -



ವಿಟ್ಲ: ಭಾರತ ಸರ್ಕಾರದ ಅಧಿಕೃತ ಪರವಾನಿಗೆ ಪಡೆದ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ, ಕೇಂದ್ರ ಕಛೇರಿ ವಿಟ್ಲ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ರೇಷ್ಮೆ ಸಹಕಾರಿ ಇಲಾಖೆ ಸಹಯೋಗದಲ್ಲಿ ರೇಷ್ಮೆ ಕೃಷಿಯನ್ನು ಪುನಶ್ಚೇತನಗೊಳಿಸಲು “ಸಮಗ್ರ ಕೃಷಿಯಲ್ಲಿ ಒಂದು ರೇಷ್ಮೆ ಕೃಷಿ” ಎಂಬ ವಿಶೇಷ ಯೋಜನೆ ಜಾರಿಗೆ ಬಂದಿದೆ.

ಮುಖ್ಯ ಅಂಶಗಳು:
*ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮತ್ತೆ ರೇಷ್ಮೆ ಕೃಷಿಗೆ ಹಿಪ್ಪು ನೇರಳೆ ಗಿಡಗಳ ಚಿಗುರು ಪ್ರಾರಂಭವಾಗಿದೆ.
*ಲಾಭದಾಯಕ ಕೃಷಿ:ಇಂದಿನ ಕೃಷಿಯಲ್ಲಿ 28 ದಿನಗಳಲ್ಲಿ ರೈತರಿಗೆ ಅತಿ ಹೆಚ್ಚು ಲಾಭದಾಯಕವಾಗಿರುವುದು ರೇಷ್ಮೆ ಕೃಷಿ.- *ವಾರ್ಷಿಕ ಆದಾಯ: ಒಂದು ಎಕರೆ ಜಮೀನಿನಲ್ಲಿ ಒಬ್ಬ ರೈತನಿಗೆ ವರ್ಷಪೂರ್ತಿ ಆರ್ಥಿಕವಾಗಿ ತನ್ನ ಕುಟುಂಬವನ್ನು ಸಂಪೂರ್ಣವಾಗಿ ಉತ್ತಮ ರೀತಿಯಲ್ಲಿ ನೋಡಿಕೊಳ್ಳಲು ರೇಷ್ಮೆ ಕೃಷಿ ಮೊದಲ ಆದಾಯ
*ಮಾಸಿಕ ಆದಾಯ 40,000+:ಒಂದು ತಿಂಗಳಲ್ಲಿ ಒಂದು ಎಕರೆ ಜಮೀನಿನಲ್ಲಿ ಒಬ್ಬ ಹೆಂಗಸು ಅಥವಾ ಒಬ್ಬ ಪುರುಷ ರೈತ 40,000 ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ತರಬಹುದು. ಕೇಂದ್ರೀಯ ಮತ್ತು ರಾಜ್ಯ ರೇಷ್ಮೆ ವಿಜ್ಞಾನಿಗಳ ಸಹಕಾರದಿಂದ ಹೊಸ ತಂತ್ರಜ್ಞಾನಗಳು ಜಾರಿಗೆ ಬಂದಿವೆ.*ಒಳ್ಳೆ ದರ:ರೇಷ್ಮೆ ಕೃಷಿಯಲ್ಲಿ ಬರುವ ರೇಷ್ಮೆ ಗೂಡಿಗೆ ಸತವಾಗಿ ಹಲವು ವರ್ಷಗಳಿಂದ ಕೆಜಿಗೆ 650 ರಿಂದ 950 ರೂಪಾಯಿ ಮಾರುಕಟ್ಟೆಯಲ್ಲಿ ದರ ಇದೆ.- *
ಸರ್ಕಾರದ ಸಹಾಯಧನ:ಕೇಂದ್ರ ರೇಷ್ಮೆ ಮಂಡಳಿ, ಕರ್ನಾಟಕ ರಾಜ್ಯ ರೇಷ್ಮೆ ಮಂಡಳಿ ಮತ್ತು ರಾಜ್ಯ ಸರ್ಕಾರದಿಂದ 70% ಕ್ಕಿಂತ ಹೆಚ್ಚಿನ ಸಬ್ಸಿಡಿ ಇದೆ. 1 ಎಕರೆಗೆ ಹಿಪ್ಪು ನೇರಳೆ ಗಿಡ ನಾಟಿ ಮಾಡಲು ಮೊದಲ ಬಾರಿಗೆ 40,000 ರೂಪಾಯಿ ಸರ್ಕಾರದ ಸಹಾಯಧನ. ರೇಷ್ಮೆ ಗೂಡು ಮಾಡಲು ರೇಷ್ಮೆ ಶೆಡ್ ನಿರ್ಮಿಸಲು ಕೂಡ ಸಬ್ಸಿಡಿ ಇದೆ. *ಶೆಡ್ಗೆ 2 ಲಕ್ಷ:650 ಚದರ ಅಡಿಯಲ್ಲಿ ನಿರ್ಮಿಸಿದ ರೇಷ್ಮೆ ಹುಳ ಮಾಡಿ ಗೂಡು ಮಾಡುವ ಕಟ್ಟಡಕ್ಕೆ 2 ಲಕ್ಷಕ್ಕಿಂತ ಮೇಲಿನ ಸಹಾಯಧನ ಸಿಗುತ್ತದೆ… 30 ರಿಂದ 40 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ರೇಷ್ಮೆ ಕಡಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗಿನ ಪರಿಸ್ಥಿತಿಯಲ್ಲಿ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ರೇಷ್ಮೆ ಸಹಕಾರಿ ನಿಗಮ ಜಂಟಿಯಲ್ಲಿ ಮತ್ತೆ ಸರಕಾರದ ಅಧಿಕಾರಿಗಳೊಂದಿಗೆ ಸೇರಿ ದಕ್ಷಿಣ ಕನ್ನಡ ರೈತರಲ್ಲಿ ಮತ್ತೆ ರೇಷ್ಮೆ ಕೃಷಿ ಚಿಗುರಬೇಕೆಂಬುದು ಆಶಯ ಮೂಡಿ ಬಂದಿದೆ*ಖರೀದಿ ಗ್ಯಾರಂಟಿ :ಸಂಪೂರ್ಣ ರೇಷ್ಮೆ ಕೃಷಿ ಮಾಡುವ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ರೇಷ್ಮೆ ಇಲಾಖೆ ಮತ್ತು ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ರೈತರು ಮಾಡಿದ ರೇಷ್ಮೆ ಗೂಡುಗಳನ್ನು ಅತಿ ಉತ್ತಮ ಮಟ್ಟದಲ್ಲಿ ಖರೀದಿ ಮಾಡುವ ಕೇಂದ್ರವು ಕೂಡ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯಬೇಕೆಂಬುದು ತೀರ್ಮಾನಿಸಲಾಗಿದೆ..*ಹೊಸ ವ್ಯವಸ್ಥೆ :ರೇಷ್ಮೆ ಹುಳಗಳನ್ನು ಮಾಡಲು ರೈತರು ರೇಷ್ಮೆ ಮೊಟ್ಟೆಗಳನ್ನು ತಂದು ಮಾಡುತ್ತಿದ್ದರು. ಇದೀಗ ಹೊಸ ತಂತ್ರಜ್ಞಾನದಿಂದ ಎಂಟರಿಂದ ಒಂಬತ್ತು ದಿವಸದ ರೇಷ್ಮೆ ಹುಳಗಳನ್ನು ರೈತರಿಗೆ ಕೊಟ್ಟು ಕೇವಲ 15 ರಿಂದ 18 ದಿವಸಗಳು ರೇಷ್ಮೆ ಹುಳಗಳಿಗೆ ಹಿಪ್ಪು ನೇರಳೆ ಸಸ್ಯಗಳ ಎಲೆಗಳನ್ನು ಹಾಕಿ ಮೇಯಿಸಿ ಉತ್ತಮ ರೇಷ್ಮೆಗಳನ್ನು ಕೊಟ್ಟಂತಹ ರೈತರಿಗೆ ಉತ್ತಮ ಆರ್ಥಿಕ ಬೆಂಬಲವನ್ನು ಕೊಟ್ಟು ಖರೀದಿಸುವ ಒಪ್ಪಂದ ಕರಾರು ಪತ್ರದ ಮೂಲಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ರೇಷ್ಮೆ ಸಹಕಾರಿ ಇಲಾಖೆ ಮತ್ತು ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ಮೂಲಕ ನಡೆಯುತ್ತದೆ ಎಂದು ಪ್ರಕಟನೆ ಮೂಲಕ ತಿಳಿಸಿದ್ದಾರೆ
- Advertisement -








