- Advertisement -
- Advertisement -


ಮಂಗಳೂರು: ಬಡ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಅತ್ತಾವರದಲ್ಲಿ ನಡೆದಿದೆ. ದಂಪತಿ ಮತ್ತು 8 ವರ್ಷದ ಮಗುವಿನ ಮೇಲೆ ಹಲ್ಲೆ ಮಾಡಲಾಗಿದೆ.
ಬಿಪುಲ್, ಮಿಥಾರಾಯ್ ಹಾಗೂ ಅವರ ಎಂಟು ವರ್ಷದ ಮಗುವಿನ ಮೇಲೆ ವಿಶ್ವನಾಥ ಮತ್ತು ಅಮೃತ ಎಂಬವರು ಹಲ್ಲೆ ನಡೆಸಿದ್ದಾರೆ. ವಿಶ್ವನಾಥ ಮತ್ತು ಅಮೃತಾ ಸೇರಿದಂತೆ ಆರು ಜನರು ಕೃತ್ಯವೆಸಗಿದ್ದು, 8 ವರ್ಷದ ಮಗುವಿಗೆ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಗೆ ಕಾರಣ ಇನ್ನಷ್ಟು ತಿಳಿದುಬರಬೇಕಿದೆ.
ಬಂಧಿತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಇತರ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.

- Advertisement -